Advertisement

Desi Swara: ದುಬೈ ಗಾಣಿಗ ಫ್ಯಾಮಿಲಿ-ಗಾಣಿಗ ಸಂಗಮ

12:17 PM Jun 29, 2024 | Team Udayavani |

ದುಬೈ: ದುಬೈ ಗಾಣಿಗ ಫ್ಯಾಮಿಲಿ ಹೆಸರಿನಲ್ಲಿ ಸಂಘಟನೆ ಶಿಕ್ಷಣ ಮತ್ತು ಧಾರ್ಮಿಕತೆ ಜತೆಗೆ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಒತ್ತು ನೀಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ ನಾಗರಾಜಪ್ಪ ಹೇಳಿದರು.

Advertisement

ಅವರು ದುಬೈ ಗಾಣಿಗ ಫ್ಯಾಮಿಲಿ ವತಿಯಿಂದ ಕರಾಮ ಸಭಾಂಗಣದಲ್ಲಿ ಪಾಣೆಮಂಗಳೂರು ಮರ್ಧೋಳಿಯ ಸುಪ್ರೀತ್‌ ಗಾಣಿಗ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಗಾಣಿಗ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಒಳಾಂಗಣ ಕ್ರೀಡೆ ಸಹಿತ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ಕ್ಷಿತಿ ಕುಮಾರಿ ಸ್ವಾಗತಿಸಿ, ವಂದಿಸಿದರು. ಅನಿರುದ್ಧ್ ಹಾಗೂ ಸುಶಾನ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next