Advertisement

ಲಂಚ ಪಡೆದ ಡಿವೈಎಸ್ಪಿಗೆ ಹಿಂಬಡ್ತಿ!

07:11 PM Nov 03, 2022 | Team Udayavani |

ಲಕ್ನೋ: ಉತ್ತರಪ್ರದೇಶ ಸರ್ಕಾರ ಭ್ರಷ್ಟಾಚಾರವನ್ನು ಮೂಲೋತ್ಪಾಟನೆ ಮಾಡಲು ಕಟಿಬದ್ಧವಾಗಿದೆ ಎನ್ನುವ ಸಂದೇಶವನ್ನು ಇನ್ನೊಮ್ಮೆ ನೀಡಿದೆ.

Advertisement

ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕಲು ಲಂಚ ಪಡೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ವಿದ್ಯಾಕಿಶೋರ್‌ ಶರ್ಮರಿಗೆ ಯೋಗಿ ಆದಿತ್ಯನಾಥ್‌ ಸರ್ಕಾರ ಇನ್ಸೆ$³ಕ್ಟರ್‌ ಆಗಿ ಹಿಂಬಡ್ತಿ ನೀಡಿದೆ. 2021ರಲ್ಲಿ ಅವರ ವಿರುದ್ಧ ಮಹಿಳೆ ಅತ್ಯಾಚಾರದ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ, ಅದಕ್ಕಾಗಿ ಲಂಚ ಪಡೆದಿದ್ದಾರೆ ಎಂದು ದೂರಿದ್ದರು. ಆ ಕೂಡಲೇ ಅವರನ್ನು ಅಮಾನತು ಮಾಡಲಾಗಿತ್ತು.

ತನಿಖೆಯ ಬಳಿಕ ಆರೋಪ ಸಾಬೀತಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ರಾಮಪುರದ ಖಾಸಗಿ ಆಸ್ಪತ್ರೆ ಮಾಲಿಕ ಮತ್ತು ಇನ್ಸ್‌ ಪೆಕ್ಟರ್‌ ರಾಮವೀರ್‌ ಎನ್ನುವವರು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರು. ಅದನ್ನು ಮುಚ್ಚಿಹಾಕಲು ವಿದ್ಯಾಕಿಶೋರ್‌ ಲಂಚ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next