Advertisement

ಕುಡಿದ ಮತ್ತಿನಲ್ಲಿ ರೈಲು ಹಳಿಯ ಮೇಲೆ ಕಾರು ಚಲಾಯಿಸಿದವನ ಬಂಧನ

04:40 PM Jul 21, 2023 | Team Udayavani |

ಕಣ್ಣೂರು: ರೈಲ್ವೆ ಹಳಿಯ ಮೇಲೆ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ ಆರೋಪದ ಮೇಲೆ 49 ವರ್ಷದ ವ್ಯಕ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಜುಲೈ 18 ರಂದು ರೈಲು ಹಳಿ ಮೇಲೆ ಕಾರನ್ನು ಓಡಿಸಿದ ಕಣ್ಣೂರು ನಿವಾಸಿ ಜಯಪ್ರಕಾಶ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಟ್ರ್ಯಾಕ್ ಮೂಲಕ ಕೆಲವು ಮೀಟರ್ ಚಲಿಸಿದ ನಂತರ ಕಾರು ಆಫ್ ಆಯಿತು, ನಂತರ ರೈಲ್ವೆ ಗೇಟ್ ಕೀಪರ್ಸ್ಥ ಮತ್ತು ಸ್ಥಳೀಯರು ಪೊಲೀಸರು ಮತ್ತು ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಮಾಹಿತಿ ನೀಡಿದ್ದಾರೆ. ಪೊಲೀಸರು ಜುಲೈ 19 ರಂದು ವ್ಯಕ್ತಿಯ ಬಂಧನ ಮಾಡಿ ಜಾಮೀನಿನ ಮೇಲೆ ಬಿಡುವ ಮೊದಲು ಕಾರನ್ನು ಜಪ್ತಿ ಮಾಡಿದ್ದಾರೆ.

“ಅವನು ಕುಡಿದು ಮಾರ್ಗವನ್ನು ತಪ್ಪಾಗಿ ಟ್ರ್ಯಾಕ್ ಮಾಡಿ ಅದರ ಮೇಲೆ ಓಡಿಸಿದಂತೆ ಕಂಡು ಬಂದಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next