Advertisement

Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ

06:25 PM Oct 25, 2024 | Team Udayavani |

ಪುತ್ತೂರು : ಕಬಕ ಪರಿಸರದಲ್ಲಿ ಸೆಂಟ್ರಿಂಗ್‌ ಕೆಲಸ ನಿರ್ವಹಿಸುತ್ತಿದ್ದ ಕಾಸರಗೋಡು ಮೂಲದ ಕಾರ್ಮಿಕರೊಬ್ಬರ ಮೃತದೇಹ ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಹಳಿಯಲ್ಲಿ ಪತ್ತೆಯಾಗಿದೆ.

Advertisement

ಕಾಸರಗೋಡು ಎಣ್ಮಕಜೆ ಗ್ರಾಮದ ಉಕ್ಕಿನಡ್ಕ ತಿಮ್ಮ ನಾಯ್ಕ ಅವರ ಪುತ್ರ ಚನಿಯಪ್ಪ ನಾಯ್ಕ ಎಸ್‌ ಯಾನೆ ರಾಧಾಕೃಷ್ಣ (48)ಮೃತಪಟ್ಟವರು.

ಕಬಕ-ಪುತ್ತೂರು ರೈಲ್ವೇ ನಿಲ್ದಾಣದ 100 ಮೀಟರ್‌ ಅಂತರದಲ್ಲಿ ರೈಲಿನ ಅಡಿಗೆ ಬಿದ್ದು ಮೃತಪಟ್ಟಿದ್ದಾರೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಮಂಗಳೂರಿಗೆ ಕೊಂಡೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ನಿ, ಪುತ್ರಿ, ಪುತ್ರನನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next