Advertisement

ಡ್ರಗ್ಸ್‌ ಸಾಗಾಟ ಶಂಕೆ; ಹೆಜಮಾಡಿಯಲ್ಲಿ ವಾಹನ ತಪಾಸಣೆ

11:20 PM Sep 11, 2020 | mahesh |

ಪಡುಬಿದ್ರಿ: ದೇಶದಾದ್ಯಂತ ಡ್ರಗ್ಸ್‌ ಜಾಲ ಸುದ್ದಿಯಾಗುತ್ತಿದ್ದಂತೆ ಉಡುಪಿ ಜಿಲ್ಲಾ ಪೊಲೀಸರೂ ಡ್ರಗ್ಸ್‌ ಜಾಲದ ವಿರುದ್ಧ ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದಾರೆ. ಶುಕ್ರವಾರ ಸಂಜೆ ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಉಡುಪಿ ಜಿಲ್ಲಾ ಎಸ್‌ಪಿ ವಿಷ್ಣುವರ್ಧನ್‌ ನೇತೃತ್ವದಲ್ಲಿ ಜಿಲ್ಲೆಯ 50ಕ್ಕೂ ಅಧಿಕ ಪೊಲೀಸರು ಉಡುಪಿ ಹಾಗೂ ಮಂಗಳೂರಿನತ್ತ ಚಲಿಸುವ ವಾಹನಗಳನ್ನು ಸಮಗ್ರ ತಪಾಸಣೆ ನಡೆಸಿದರು.

Advertisement

ಸ್ವತಃ ಎಸ್‌ಪಿ ವಿಷ್ಣುವರ್ಧನ್‌ ಹೆದ್ದಾರಿಯಲ್ಲಿ ನಿಂತು ವಾಹನ ತಪಾಸಣೆಯಲ್ಲಿ ಭಾಗಿಯಾಗಿದ್ದ‌ರು. ಈ ಸಂದರ್ಭ ಸಾರ್ವಜನಿಕರು ಗಲಿಬಿಲಿಗೊಂಡರೂ ತಪಾಸಣೆಗೆ ಸಹಕರಿಸಿದರು. ಮಣಿಪಾಲ ಕಡೆಯಿಂದ ಐವರು ಯುವಕರಿದ್ದ ಕಾರೊಂದನ್ನು ತಪಾಸಣೆ ನಡೆಸಿದಾಗ ಅವರು ಡ್ರಗ್ಸ್‌ ಸೇವಿಸಿರುವುದು ಪತ್ತೆಯಾದ ಕಾರಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಎಡಿಶನಲ್‌ ಎಸ್‌ಪಿ ಕುಮಾರಚಂದ್ರ, ಕಾರ್ಕಳ ಡಿವೈಎಸ್‌ಪಿ ಭರತ್‌ ರೆಡ್ಡಿ, ಡಿಆರ್‌ ಡಿವೈಎಸ್‌ಪಿ ರಾಘವೇಂದ್ರ, ಕಾಪು ಸಿಪಿಐ ಮಹೇಶ್‌ ಪ್ರಸಾದ್‌, ಕಾರ್ಕಳ ಸಿಪಿಐ ಸಂಪತ್‌, ಪಡುಬಿದ್ರಿ ಪಿಎಸ್‌ಐ ದಿಲೀಪ್‌ ಗೌಡ, ಟ್ರಾಫಿಕ್‌ ಪಿಎಸ್‌ಐ ಅಬ್ದುಲ್‌ ಖಾದರ್‌ ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next