Advertisement

Manipal: ಔಷಧ ದ್ರಾವಣ ಚಿಮ್ಮಿ ಐವರಿಗೆ ಗಾಯ

01:12 AM Oct 20, 2023 | Team Udayavani |

ಮಣಿಪಾಲ: ಕೈಗಾರಿಕೆ ಪ್ರದೇಶದ ಔಷಧ ತಯಾರಿಕೆಯ ಕಂಪೆನಿಯಲ್ಲಿ ಅ. 16ರಂದು ಕುದಿಯುವ ಔಷಧ ದ್ರಾವಣ ಚೆಲ್ಲಿ ಐವರು ಗಾಯಗೊಂಡ ಘಟನೆ ನಡೆದಿದೆ.

Advertisement

ಆಯುರ್ವೇದ ಔಷಧ ತಯಾರಿಕಾ ಸಂಸ್ಥೆಯ ಪ್ರೊಡಕ್ಷನ್‌ ವಿಭಾಗದ ಕೆಲಸದವರಾದ ದೀಕ್ಷಿತ್‌, ಉಮೇಶ್‌, ದಿನೇಶ್‌, ಹರೀಶ್‌, ಗೋಪಾಲ ಗಾಯಗೊಂಡ ಕಾರ್ಮಿ ಕರು. ಹೊಸದಾಗಿ ಅಳವಡಿಸಿದ ಔಷಧ ಕುದಿಯುವ ಕಂಟೈನರ್‌ನ ಬಳಿ ಕೆಲಸ ಮಾಡುತ್ತಿದ್ದ ವೇಳೆ ಕಂಟೈನರ್‌ ಮುಚ್ಚಳ ಒಮ್ಮೆಲೇ ತೆರೆಯಲ್ಪಟ್ಟು ಕುದಿಯುತ್ತಿದ್ದ ಔಷಧ ದ್ರಾವಣ ರಭಸದಿಂದ ಕಾರ್ಮಿಕರ ಮೇಲೆ ಚೆಲ್ಲಿದಾಗ ಸುಟ್ಟ ಗಾಯಗಳಾದವು. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next