Advertisement

ನಾನು ಬಿಜೆಪಿ ತೊರೆಯಲ್ಲ: ಡಾ.ಸಿದ್ದರಾಮಯ್ಯ

12:42 PM Nov 02, 2018 | Team Udayavani |

ಮಂಡ್ಯ: ತಾವು ಯಾವುದೇ ಆಮಿಷಗಳಿಗೂ ಒಳಗಾಗುವುದಿಲ್ಲ. ಬಿಜೆಪಿ ತೊರೆಯುವುದಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Advertisement

ಡಾ.ಸಿದ್ದರಾಮಯ್ಯನವರನ್ನು ಸೆಳೆಯುವುದಕ್ಕೂ ಕಾಂಗ್ರೆಸ್‌-ಜೆಡಿಎಸ್‌ನಾಯಕರು ಮುಂದಾಗಿದ್ದಾರೆ ಎಂಬ ಬೇಳೂರುಗೋಪಾಲಕೃಷ್ಣ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಆರ್‌.ಅಶೋಕ್‌, ಪತ್ರಿಕಾಗೋಷ್ಠಿಯ ಮಧ್ಯದಲ್ಲೇ ಸಿದ್ದರಾಮಯ್ಯನವರಿಗೆ ದೂರವಾಣಿ ಕರೆ ಮಾಡಿದರು. ಅಶೋಕ್‌ ಅವರ ಕರೆ ಸ್ವೀಕರಿಸಿ ಮಾತನಾಡಿದ ಡಾ.ಸಿದ್ದರಾಮಯ್ಯ, ನಾನು ಗೌರವಯುತ ಕುಟುಂಬದಿಂದ ಬಂದಿದ್ದೇನೆ. ಬಿಜೆಪಿ ಸಿದ್ಧಾಂತ ಒಪ್ಪಿ ಬಂದಿದ್ದೇನೆ. ನನಗೂ ಸಿದ್ಧಾಂತ ಇದೆ. ನಾನು ಮಳವಳ್ಳಿ ಕ್ಷೇತ್ರದಲ್ಲಿ ಚುನಾವಣ ಪ್ರಚಾರದಲ್ಲಿದ್ದೇನೆ. ಯಾವುದೇ ಆಮಿಷಗಳಿಗೂ ಒಳಗಾಗುವುದಿಲ್ಲ. ನಾನು ಬಿಜೆಪಿ ಬಿಟ್ಟರೆ ಮನೆಗೆ ಹೋಗುತ್ತೇನೆಯೇ ವಿನ: ಪಕ್ಷದ್ರೋಹ ಎಸಗಲಾರೆ. ನನ್ನ
ವಿರುದ್ಧ ವಿರೋಧಿಗಳು ಅಪಪ್ರಚಾರ ಮಾಡುವ ಮೂಲಕ ತೇಜೋವಧೆ ಮಾಡುವ ಯತ್ನ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ಬಳಿಕ ಮಾತನಾಡಿದ ಆರ್‌. ಅಶೋಕ್‌, ಬೇಳೂರಿಗೆ ತಲೆಕೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

Advertisement

Udayavani is now on Telegram. Click here to join our channel and stay updated with the latest news.

Next