Advertisement

Manipur: ಲೂಟಿಯಾದ ಶಸ್ತ್ರಾಸ್ತ್ರ ಹಾಕಲು “ಡ್ರಾಪ್‌ಬಾಕ್ಸ್‌”

08:19 PM Jun 10, 2023 | Team Udayavani |

ಇಂಫಾಲ್‌: ಮಣಿಪುರದಲ್ಲಿ ಕಳೆದ ತಿಂಗಳ ಹಿಂಸಾಚಾರದ ವೇಳೆ ಲೂಟಿಯಾಗಿರುವ ನೂರಾರು ಶಸ್ತ್ರಾಸ್ತ್ರಗಳು ಇನ್ನೂ ವಾಪಸ್‌ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇಂಫಾಲ್‌ನ ಬಿಜೆಪಿ ಶಾಸಕರೊಬ್ಬರು ತಮ್ಮ ಮನೆಯಲ್ಲೇ “ಡ್ರಾಪ್‌ಬಾಕ್ಸ್‌’ವೊಂದನ್ನು ಅಳವಡಿಸಿದ್ದಾರೆ.

Advertisement

ಮನೆಯ ಹೊರಗಿನ ಶೆಡ್‌ನ‌ಲ್ಲಿ ದೊಡ್ಡದಾದ ಪೆಟ್ಟಿಗೆಯನ್ನು ಇಡಲಾಗಿದ್ದು, “ದಯವಿಟ್ಟು ಲೂಟಿಯಾಗಿರುವ ಶಸ್ತ್ರಾಸ್ತ್ರಗಳನ್ನು ಈ ಪೆಟ್ಟಿಗೆಯಲ್ಲಿ ತಂದುಹಾಕಿ’ ಎಂದು ಮೈತೇಯಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಬರೆಯಲಾಗಿದೆ. ಅಲ್ಲದೇ, ಶಸ್ತ್ರಾಸ್ತ್ರ ಮರಳಿಸುವವರ ಗುರುತು ಬಹಿರಂಗಪಡಿಸುವುದಿಲ್ಲ, ಅದು ನಿಮ್ಮ ಕೈಗೆ ಹೇಗೆ ಬಂತು ಎಂದು ಪ್ರಶ್ನಿಸುವುದಿಲ್ಲ ಎಂಬರ್ಥದಲ್ಲಿ, ಪೆಟ್ಟಿಗೆಯ ಮೇಲೆ “ಶಸ್ತ್ರಾಸ್ತ್ರ ವಾಪಸ್‌ ಮಾಡಲು ಯಾವುದೇ ಮುಜುಗರ ಬೇಡ’ ಎಂದೂ ಬರೆಯಲಾಗಿದೆ.

ಶಾಂತಿ ಸಮಿತಿ ರಚನೆ:
ಈ ನಡುವೆ, ಮಣಿಪುರದಲ್ಲಿ ಶುಕ್ರವಾರ ಹಿಂಸಾಚಾರ ಮರುಕಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಪಾಲರ ನೇತೃತ್ವದಲ್ಲಿ ಶಾಂತಿ ಸಮಿತಿಯೊಂದನ್ನು ರಚಿಸಿದೆ. ಮುಖ್ಯಮಂತ್ರಿ, ಕೆಲವು ಸಚಿವರು, ಸಂಸದರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಮಾಜದ ನಾಯಕರು ಈ ಸಮಿತಿಯಲ್ಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next