Advertisement

ಡ್ರೋನ್‌ ಬಳಕೆ: ಕಮಿಷನರ್‌ ಎಚ್ಚರಿಕೆ

02:34 AM Jan 19, 2021 | Team Udayavani |

ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಡ್ರೋನ್‌ ಬಳಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಎನ್‌. ಶಶಿಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದಲ್ಲಿ ಕೈಗಾರಿಕೆ, ಪ್ರವಾಸಿ ತಾಣ, ಧಾರ್ಮಿಕ, ವಿದ್ಯಾ ಸಂಸ್ಥೆಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು, ತೈಲ ಸಂಗ್ರಹಣ ಕೇಂದ್ರ ಹಾಗೂ ಇನ್ನಿತರ ಸೂಕ್ಷ್ಮ ಪ್ರದೇಶಗಳಿದ್ದು ಅವುಗಳ ಭದ್ರತೆ ಹಾಗೂ ಸಾರ್ವಜನಿಕ ಸುರಕ್ಷತೆ ಕಾಪಾಡುವ ಉದ್ದೇಶದಿಂದ ಡಿಜಿಸಿಎ ಮಾರ್ಗಸೂಚಿಯಂತೆ ಎಲ್ಲ ವರ್ಗದ ಡ್ರೋನ್‌ ಬಳಕೆಗೆ ಅನುಮತಿ ಪಡೆಯಬೇಕು. ಅನುಮತಿಯನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪಪೊಲೀಸ್‌ ಆಯುಕ್ತರ ಕಚೇರಿಯಿಂದ ಪಡೆದುಕೊಳ್ಳಬಹುದು. ಡ್ರೋನ್‌ ಹಾರಿಸುವಾಗ ಏನಾದರೂ ಘಟನೆ/ ಅಪಘಾತ ಸಂಭವಿಸಿದರೆ ಮೂರನೇ ವ್ಯಕ್ತಿಗೆ ಆಗುವ ಹಾನಿಯನ್ನು ಭರಿಸಲು ಆಪರೇಟರ್‌ಗಳು ಹೊಣೆಗಾರಿಕೆಯೊಂದಿಗೆ ವಿಮೆ ಹೊಂದಿರಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next