Advertisement

ವಿಶ್ವ ತೊನ್ನು ರೋಗ ಜಾಗೃತಿ ರಥಯಾತ್ರೆಗೆ ಚಾಲನೆ

07:50 AM Jun 30, 2018 | Team Udayavani |

ಉಡುಪಿ: ವಿಶ್ವ ತೊನ್ನು ರೋಗ ದಿನಾಚರಣೆಯ ಅಂಗವಾಗಿ ರಾಜ್ಯಾದ್ಯಂತ ಸಾಗಲಿರುವ ತೊನ್ನುರೋಗ ಜಾಗೃತಿ ರಥಯಾತ್ರೆಗೆ ಗುರುವಾರ ಮಣಿಪಾಲ ಕೆಎಂಸಿ ವಠಾರದಲ್ಲಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ| ಪದ್ಮರಾಜ ಹೆಗ್ಡೆ ಚಾಲನೆ ನೀಡಿದರು.

Advertisement

ತೊನ್ನು ರೋಗದ ಬಗ್ಗೆ ಜಾಗೃತಿ ಅತ್ಯಂತ ಅಗತ್ಯವಾಗಿದ್ದು, ಜನರು ಇದರ ಪ್ರಯೋಜನ ಪಡೆಯಬೇಕೆಂದು ಡಾ| ಹೆಗ್ಡೆ ತಿಳಿಸಿದರು.

ಚರ್ಮರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಶ್ರುತಕೀರ್ತಿ ಶೆಣೈ, ತೊನ್ನುರೋಗ ಶಾಪವಲ್ಲ. ಅಂಟು ರೋಗ ಅಲ್ಲ. ಇದನ್ನೂ ಗುಣಪಡಿಸಲು ಸಾಧ್ಯ ಈ ನಿಟ್ಟಿನಲ್ಲಿ ರಾಜ್ಯಚರ್ಮ ರೋಗತಜ್ಞರ ಸಂಘದ ಮೂಲಕ ಈ ರಥಯಾತ್ರೆಯು ನಡೆಯುತ್ತಿದೆ ಎಂದರು.

ಡಾ| ವರ್ಷಾ ಶೆಟ್ಟಿ, ಡಾ| ಮೇಘನಾ, ಡಾ| ಸ್ಮಿತಾ ಪ್ರಭು, ಡಾ| ಸುಧೀರ್‌ ಕಾಮತ್‌ ಮತ್ತು ವೈದ್ಯಕೀಯ ವಿದ್ಯಾರ್ಥಿ ಗಳು ಭಾಗವಹಿಸಿದ್ದರು. 

ಮಾಧವ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಗಳು ಜಾಥಾದಲ್ಲಿ ಭಾಗವ ಹಿಸಿದ್ದರು. ಈ ಸಂದರ್ಭದಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘದ ಮಧುಸೂದ‌ನ್‌ ಹೇರೂರು, ರವಿರಾಜ್‌ ಎಚ್‌.ಪಿ., ಶ್ರೀನಾಥ್‌ ಕೋಟ, ಉಪನ್ಯಾಸಕ ಚಿರಂಜನ್‌ ಸೇರಿಗಾರ್‌ ಮತ್ತಿತರರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next