Advertisement

ಇಂದು ಕೃಷಿ ಮೇಳಕ್ಕೆ ಚಾಲನೆ

11:33 AM Nov 15, 2018 | Team Udayavani |

ಬೆಂಗಳೂರು: ಕೃಷಿ ಸಮಸ್ಯೆಗಳಿಗೆ ಪರಿಹಾರಗಳು, ಉತ್ಪನ್ನಗಳ ಮೌಲ್ಯವರ್ಧನೆ, ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ರೈತರನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಸಂವಾದ, ಕೃಷಿಯಲ್ಲಿ ಬಳಕೆಯಾಗುತ್ತಿರುವ ಸುಧಾರಿತ ಹಾಗೂ ನವೀನ ತಂತ್ರಜ್ಞಾನ, ಹೊಸ ಯಂತ್ರಗಳ ಪ್ರದರ್ಶನ, ಹೊಸ ತಳಿಗಳ ಪ್ರಾತ್ಯಕ್ಷಿತೆ ಹೀಗೆ ಒಂದೇ ಸೂರಿನಡಿ ಹತ್ತಾರು ಸೇವೆಗಳನ್ನು ಒದಗಿಸುವ “ಕೃಷಿ ಮೇಳ-2018’ಕ್ಕೆ ಗುರುವಾರ (ನ.15) ಚಾಲನೆ ದೊರೆಯಲಿದೆ.

Advertisement

ಬೆಂಗಳೂರು ಕೃಷಿ ವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರಗಳ (ಜಿಕೆವಿಕೆ) ಆಯೋಜಿಸಿರುವ ಕೃಷಿ ಮೇಳಕ್ಕೆ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಚಾಲನೆ ನೀಡಲಿದ್ದು, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೆ ಮಧ್ಯಾಹ್ನ 2.30ಕ್ಕೆ ವಿವಿಧ ಪ್ರಶಸ್ತಿ ಪ್ರದಾನ ನಡೆಯಲಿದೆ.
 
ಸಚಿವರಾದ ಎನ್‌.ಎಚ್‌.ಶಿವಶಂಕರ ರೆಡ್ಡಿ, ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌,
ಅಧಿಕಾರಿಗಳಾದ ಎಂ.ಮಹೇಶ್ವರ್‌ ರಾವ್‌, ಐಎಸ್‌ ಎನ್‌ ಪ್ರಸಾದ್‌, ಡಾ.ವಂದಿತಾ ಶರ್ಮ, ಡಾ.ಕೆ.ಜಿ.ಜಗದೀಶ್‌, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ನ.15ರಿಂದ 18ವರೆಗೆ ಬ್ಯಾಟರಾಯನಪುರದ ಜಿಕೆವಿಕೆಯಲ್ಲಿ ಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ಬುಧವಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗುರುವಾರದಿಂದ ರಾಜಧಾನಿಯ ಕಡೆಗೆ ಅನ್ನದಾತರು ಲಗ್ಗೆಯಿಡಲಿದ್ದಾರೆ. ಅದರಂತೆ ತಾವು ಅನುಸರಿಸುತ್ತಿರುವ ಸುಧಾರಿತ ಕೃಷಿ ಮಾದರಿಗಳು, ಕಡಿಮೆ ನೀರು ಬಳಕೆ ಮಾಡಿ ಹೆಚ್ಚಿನ ಆದಾಯ ಬರುತ್ತಿರುವುದು, ಕೃಷಿಯ ಸಮಸ್ಯೆಗಳನ್ನು ಎದುರಿಸಿದ ಬಗ್ಗೆ ರೈತರು ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

ಮೇಳದಲ್ಲಿ ಇತ್ತೀಚೆಗೆ ಬಿಡುಗಡೆಯಾದ ವಿವಿಧ ತಳಿಗಳ ಪ್ರಾತ್ಯಕ್ಷಿಕೆ, ಖುಷ್ಕಿ ಬೇಸಾಯಕ್ಕೆ ಸೂಕ್ತ ಬೆಳೆ ಪದ್ಧತಿಗಳು, ಸಿರಿಧಾನ್ಯಗಳು ಮತ್ತು ಅವುಗಳ ಮಹತ್ವ, ಇಸ್ರೇಲ್‌ಗೆ ಭೇಟಿ ನೀಡಿದ್ದ ಕೃಷಿ ತಜ್ಞರು ಮತ್ತು ಪ್ರಗತಿಪರ ರೈತರೊಂದಿಗೆ ಸಂವಾದ, ಸಾಂದರ್ಭಿಕ ಚಿತ್ರ ಕೃಷಿ ವಸ್ತು ಪ‹ದರ್ಶನದ ವಿಶೇಷತೆ ಈ ಬಾರಿಯ ಕೃಷಿ ವಸ್ತು ಪ್ರದರ್ಶನದಲ್ಲಿ ಕೃಷಿ ಎಂಜನಿಯರಿಂಗ್‌ ವಿಭಾಗದ ಮಳಿಗೆಯಲ್ಲಿ 150ಕ್ಕೂ ಅಧಿಕ ದೇಶದ ಪ್ರತಿಷ್ಠಿತ ಸಂಸ್ಥೆಗಳು ತಮ್ಮ ವಿನೂತನ ಉಪಕರಣಗಳ ಜತೆ ಭಾಗವಹಿಸಿ ರೈತರ ಗಮನ ಸೆಳೆಯಲಿವೆ. ಇದರೊಂದಿಗೆ ಪಶು ಸಂಗೋಪನೆಗೆ ಸಂಬಂಧಿಸಿದಂತೆ 50 ಹೆಚ್ಚು ಮಳಿಗೆಗಳಲ್ಲಿ ವಿವಿಧ ತಳಿಯ ಹಸು, ಕುರಿ, ಮೇಕೆ, ಕೋಳಿ, ಹಂದಿ ಹಾಗೂ ಮೊಲಗಳ ಪ್ರದರ್ಶನ ಇರಲಿದೆ.

ಮಾಹಿತಿ ಜೊತೆ ಮನರಂಜನೆ ಕೃಷಿ ಜ್ಞಾನ ಭಂಡಾರದ ಜತೆಗೆ ನಮ್ಮ ನಾಡಿನ ಸಾಂಸ್ಕೃತಿಕ ಕಲಾ ವೈಭವಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಭಾಗವಹಿಸಿದವರಿಗೆ ನಾಡಿನ ಹಿರಿಮೆ ಗರಿಮೆ ಕುರಿತು ಜ್ಞಾನದ ಜತೆಗೆ ಮನೋರಂಜನೆಯೂ ದೊರೆಯಲಿದೆ.

Advertisement

ವಿಶೇಷ ಬಸ್‌ ವ್ಯವಸ್ಥೆ ಬಸ್‌ಗಳಲ್ಲಿ ಜಿಕೆವಿಕೆಗೆ ಬರುವವರ ಅನುಕೂಲಕ್ಕಾಗಿ ಬೆಂಗಳೂರು ಕೃಷಿ ವಿದ್ಯಾಲಯದ ಬಸ್‌ಗಳನ್ನು ನಿಯೋಜಿಸಲಾಗಿದೆ. ಜಿಕೆವಿಕೆ ಗೇಟ್‌ನಿಂದ ಮೇಳದ ಜಾಗದವರೆಗೆ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸಿರುವುದರಿಂದ ಸುಲಭವಾಗಿ ಜನರು ಮೇಳದ ಜಾಗಕ್ಕೆ ತಲುಪಬಹುದಾಗಿದೆ. ಅದೇ ರೀತಿ ಮೇಳದ ಜಾಗದಿಂದಲೂ ಗೇಟಿಗೆ ಬರಲು ಬಸ್‌ ವ್ಯವಸ್ಥೆಯಿದೆ. ಇದರೊಂದಿಗೆ ಮೇಳದ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕೃಷಿ ಮೇಳಕ್ಕೆಯಾವ ಬಸ್‌?
ಮೆಜೆಸ್ಟಿಕ್‌ನಿಂದ ಹೊರಡುವ ಬಿಎಂಟಿಸಿ ಬಸ್‌ಗಳ ಸಂಖ್ಯೆ: 277, 280, 281, 282, 283, 284, 284ಎ, ಬಿ, ಸಿ ಮತ್ತು ಡಿ, 285, 286ಎ, 289, 289ಎ, 402, 298ಎಂ, 299 ಹಾಗೂ ಸುವರ್ಣ ಸಾರಿಗೆ ಮೂಲಕ ರೈತರು ಮೇಳದ ಸ್ಥಳ ತಲುಪಬಹುದು. 

ಕೃಷಿ ಆಧುನಿಕ ಖುಷಿ ಜೀವನ ಸಾವಯವ ಕೃಷಿ, ಮನೆಯಲ್ಲಿ ಬೆಳೆಯುವಂತಹ ತರಕಾರಿಗಳು ಸೇರಿದಂತೆ ಒಟ್ಟು 750
ಮಳಿಗೆಗಳು ತಲೆಯೆತ್ತಲಿವೆ. ಪ್ರಸಕ್ತ ಸಾಲಿನ ಕೃಷಿ ಮೇಳಕ್ಕೆ 12 ಲಕ್ಷ ಜನರು ಬರುವ ನಿರೀಕ್ಷೆಯನ್ನು ಹೊಂದಲಾಗಿದೆ.

ಅದರಂತೆ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಉಚಿತ ಪ್ರವೇಶವಿದೆ. ಜತೆಗೆ ಮೇಳಕ್ಕೆ ದೂರದ ಊರುಗಳಿಂದ ಬರುವವರಿಗೆ ಮಾಹಿತಿ ನೀಡುವ ಉದ್ದೇಶದಿಂದ ವಿಶೇಷವಾದ ಆ್ಯಪ್‌ ಅಭಿವೃದ್ಧಿಪಡಿಸಲಾಗಿದ್ದು, ಕೃಷಿ ಮೇಳಕ್ಕೆ ಹೇಗೆ ಬರಬೇಕು, ಪ್ರದರ್ಶನದಲ್ಲಿನ ಈ ಬಾರಿಯ ವಿಶೇಷತೆಗಳು, ಕಾರ್ಯಕ್ರಮ ಹಾಗೂ ಸಂವಾದ ವಿವರಗಳು ಸೇರಿದಂತೆ ಸಮಗ್ರ ಮಾಹಿತಿ “ಕೃಷಿ ಮೇಳ -2018′ ಆ್ಯಪ್‌ನಲ್ಲಿ ದೊರೆಯಲಿವೆ.

ಕೃಷಿ ಪ್ರದರ್ಶನದಲ್ಲಿ 750 ಮಳಿಗೆಗಳಿದ್ದು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಅಂಗ ಸಂಸ್ಥೆಗಳು, ರಾಜ್ಯ ಸರ್ಕಾರದ ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಲು ಮಹಾಮಂಡಳಿ, ಕೃಷಿ ಪರಿಕರ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳು, ಸ್ವ-ಸಹಾಯ ಸಂಸ್ಥೆಗಳು ಭಾಗವಹಿಸಿ ಮಳಿಗೆ ಹಾಕಲಿವೆ.

ಕೃಷಿ ಮೇಳಕ್ಕೆಯಾವ ಬಸ್‌?
ಮೆಜೆಸ್ಟಿಕ್‌ ನಿಂದ ಹೊರಡುವ ಬಿಎಂಟಿಸಿ ಬಸ್‌ಗಳ ಸಂಖ್ಯೆ: 277, 280, 281, 282, 283, 284, 284ಎ, ಬಿ, ಸಿ ಮತ್ತು ಡಿ, 285, 286ಎ, 289, 289ಎ, 402, 298ಎಂ, 299 ಹಾಗೂ ಸುವರ್ಣ ಸಾರಿಗೆ ಮೂಲಕ ರೈತರು ಮೇಳದ ಸ್ಥಳ ತಲುಪಬಹುದು.

Advertisement

Udayavani is now on Telegram. Click here to join our channel and stay updated with the latest news.

Next