Advertisement

ವಿಷ್ಣುವರ್ಧನ್‌ರ ಕಂಚಿನ ಪ್ರತಿಮೆ ಸ್ಥಾಪನೆಗೆ ಚಾಲನೆ

11:47 AM Sep 19, 2017 | Team Udayavani |

ಕೆ.ಆರ್‌.ಪುರ: ಚಿತ್ರನಟ ದಿ ಡಾ.ವಿಷ್ಣುವರ್ಧನ್‌ರ 67ನೇ ಜನ್ಮದಿನದ ಅಂಗವಾಗಿ ವಿಷ್ಣುಸೇನಾ ಅಭಿಮಾನಿಗಳ ಒಕ್ಕೂಟದಿಂದ ಇಲ್ಲಿನ ವೆಂಗಯ್ಯನ ಕೆರೆ ಬಳಿ ಡಾ.ವಿಷ್ಣುವರ್ಧನ್‌ ರ 9 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಲಾಯಿತು. 

Advertisement

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಪಾಲಿಕೆ ಸದಸ್ಯ ಪಿ.ಜೆ.ಅಂತೋಣಿ ಸ್ವಾಮಿ, “ಕನ್ನಡ ಚಿತ್ರರಂಗದಲ್ಲಿ ಅಪ್ರತಿಮ ಸಾಧನೆ ಮಾಡಿರುವ ಡಾ.ವಿಷ್ಣುವರ್ದನ್‌ ಎಂದಿಗೂ ಮರೆಯಲಾಗದ ಮಾಣಿಕ್ಯ. ಬೆಂಗಳೂರು ಪೂರ್ವ  ತಾಲೂಕಿನಲ್ಲಿ ಅವರ ಕಂಚಿನ ಪ್ರತಿಮೆ ನಿರ್ಮಿಸಬೇಕು ಎಂಬುದು ವಿಷ್ಣು ಅಭಿಮಾನಿಗಳ ಬೇಡಿಕೆಯಾಗಿತ್ತು. ಅದರಂತೆ ಪ್ರಸ್ತುತ 10 ಲಕ್ಷ ರೂ. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ,’ ಎಂದು ಹೇಳಿದರು. 

ಇದೇ ವೇಳೆ ಅಭಿಮಾನಿಗಳು ಕೇಕ್‌ ಕತ್ತರಿಸುವ ಮೂಲಕ ಡಾ.ವಿಷ್ಣುವರ್ಧನ್‌ರ ಜನ್ಮದಿನ ಆಚರಿಸಿದರು. ವಿಷ್ಣುಸೇನಾ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಮ್ಬಾಬು, ಕಾಂಗ್ರೆಸ್‌ ಮುಖಂಡ ಎಲ್‌.ಮುನಿಸ್ವಾಮಿ, ಎಲ್‌.ಐ.ಸಿ.ವೆಂಕಟೇಶ್‌, ಒಕ್ಕೂಟದ ಸದಸ್ಯರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next