Advertisement

ಮೊಬೈಲ್‌ ಕ್ಲಿನಿಕ್‌ ಸೇವೆಗೆ ಚಾಲನೆ

03:24 PM Apr 30, 2020 | mahesh |

ಮೈಸೂರು: ಮೈಸೂರು ಪಾಲಿಕೆಯಿಂದ ಆಯ್ದ ಪ್ರದೇಶಗಳ ಮನೆ ಬಾಗಿಲಿಗೆ ವೈದ್ಯರು ಹೋಗಿ ವೈದ್ಯಕೀಯ ತಪಾಸಣೆ ನಡೆಸುವ ವಿನೂತನ ಕಾರ್ಯಕ್ರಮವಾದ ಕೋವಿಡ್‌-19
ಮೊಬೈಲ್‌ ಕ್ಲಿನಿಕ್‌ ಸೇವೆಗೆ ಬುಧವಾರ ಸಚಿವ ಎಸ್‌.ಟಿ.ಸೋಮಶೇಖರ್‌ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಸಚಿವರು, ಈಗಾಗಲೇ ನಂಜನಗೂಡಿನಲ್ಲಿ ಈ ಮೊಬೈಲ್‌ ಕ್ಲಿನಿಕ್‌ ಸೇವೆ ಪ್ರಾರಂಭಿಸಲಾಗಿದೆ. ವೈದ್ಯರು ಕೋವಿಡ್  ಹಾಟ್‌ ಸ್ಪಾಟ್‌ಗಳಿಗೆ ತೆರಳಿ ಪ್ರತಿಯೊಬ್ಬರನ್ನು ವೈದ್ಯಕೀಯ ತಪಾಸಣೆ ನಡೆಸುತ್ತಿದ್ದಾರೆ. ಅದರಂತೆ ಮೈಸೂರಿನಲ್ಲೂ ಸುಮಾರು 10 ಮೊಬೈಲ್‌ ಕ್ಲಿನಿಕ್‌ ಸೇವೆಗೆ ಚಾಲನೆ ನೀಡಿದ್ದು, ಇದು ಪಾಲಿಕೆ ಅಧಿಕಾರಿಗಳು ತಿಳಿ ಸುವ ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಿಗೆ ತಪಾಸಣೆ ಮಾಡಲಿದೆ, ಇದರಿಂದ ಜನರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.

Advertisement

ಕೋವಿಡ್ ಈಗಾಗಲೇ ಮೈಸೂರಿನಲ್ಲಿ ನಿಯಂತ್ರಣಕ್ಕೆ ಬಂದಿದೆ. ಪಾಸಿಟಿವ್‌ ಇರುವವರು ಗುಣಮುಖರಾಗುತ್ತಿರುವುದು ಮೈಸೂರು ಜನತೆಗೆ ನೆಮ್ಮದಿ ತಂದಿದೆ. ಇದೇ ಪರಿಸ್ಥಿತಿ ಮುಂದುವರಿಯಲು ಈ ಮೊಬೈಲ್‌ ಕ್ಲಿನಿಕ್‌ ಸೇವೆ ಇನ್ನೂ ಅನುಕೂಲವಾಗಲಿದೆ. ಜನರ ಬಳಿಯೇ ವೈದ್ಯರು ಹೋಗುವುದರಿಂದ ಅಲ್ಲಿನ ಜನತೆ ತಪಾಸಣೆ ಮಾಡಿಸಿಕೊಂಡು, ಅವರಿಗೆ ಬೇಕಾದ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಏನಿದೆ ಮೊಬೈಲ್‌ ಕ್ಲಿನಿಕ್‌ನಲ್ಲಿ: ಮೊಬೈಲ್‌ ಕ್ಲಿನಿಕ್‌ಗಳಲ್ಲಿ ವೈದ್ಯರು, ಸ್ಟಾಫ್ ನರ್ಸ್‌, ಡ್ರೈವರ್‌, ಅಟೆಂಡರ್‌ ಮಾತ್ರ ಇರುತ್ತಾರೆ. ಪಾಲಿಕೆ ಅಧಿಕಾರಿಗಳು ಸೂಚಿಸಿದ ಪ್ರದೇಶಗಳಿಗೆ ನಿತ್ಯ ತೆರಳಿ, ಆ ಪ್ರದೇಶದ ಸಮುದಾಯ ಭವನ, ಶಾಲೆ, ಅಂಗನವಾಡಿ ಹೀಗೆ ಇನ್ನಿತರ ಯಾವುದೇ ಸಾರ್ವಜನಿಕ ಕಟ್ಟಡದಲ್ಲಿ ಆರೋಗ್ಯ ತಪಾಸಣೆ ಹಮ್ಮಿಕೊಂಡು, ಅಲ್ಲಿನ ಜನತೆಗೆ ಜ್ವರ, ಬಿಪಿ, ಶುಗರ್‌, ಸ್ಕ್ರೀನಿಂಗ್‌ ಸೇರಿದಂತೆ ಮೊದಲಾದ ತಪಾಸಣೆ ನಡೆಸಿ, ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ. ನೂತನ ಆರೋಗ್ಯ ಕಾರ್ಯಕ್ರಮಕ್ಕಾಗಿ ವಿದ್ಯಾವಿಕಾಸ್‌ ಶಿಕ್ಷಣ ಸಂಸ್ಥೆ, ಜೈನ್‌ ಸಮಾಜ, ಗೋಪಾಲಗೌಡ ಶಾಂತವೇರಿ ಆಸ್ಪತ್ರೆಯ ವಾಹನಗಳು, ನಾರಾಯಣ ಹೃದಯಾಲಯ ಆಸ್ಪತ್ರೆಯ ಶುಷೂಕಿಯರು, ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯರು, ಅರೆ ವೈದ್ಯರು ಮತ್ತು ವೈಶಾಲಿ ಹೆರಿಗೆ ಆಸ್ಪತ್ರೆಯ ಡಾಕ್ಟರ್‌ಗಳು ಈ ಸೇವೆಯಲ್ಲಿ ತೊಡಗಿದ್ದಾರೆ.

ಬುಧವಾರ ಮಂಡಕಳ್ಳಿ, ರಮಾಬಾಯಿ ನಗರ, ಗುಂಡುರಾವ್‌ ನಗರ, ಗೋಕುಲಂ 2ನೇ ಹಂತ, ಗಿರಿಬೋವಿಪಾಳ್ಯ, ಬಸವನಗುಡಿ, ಹೈವೇ ಸರ್ಕಲ್‌ ಸ್ಥಳ ಗಳಿಗೆ ತೆರಳಿ ಆರೋಗ್ಯ
ತಪಾಸಣೆ ನಡೆಸಲಾಯಿತು. ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆ ಆರೋಗ್ಯಾ ಧಿಕಾರಿ ಡಾ.ನಾಗರಾಜು ಮಾತನಾಡಿದರು. ಮೇಯರ್‌ ತಸ್ನೀಂ, ಶಾಸಕರಾದ ಎಸ್‌. ಎ. ರಾಮದಾಸ್‌, ಎಲ್‌. ನಾಗೇಂದ್ರ, ಡೀಸಿ ಅಭಿ ರಾಮ್‌ ಜಿ.ಶಂಕರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next