Advertisement

ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ

09:28 PM Oct 20, 2019 | sudhir |

ಗೋಣಿಕೊಪ್ಪಲು: ಪಾಲಿಬೆಟ್ಟದ ಡಾ. ಬಿ.ಆರ್‌. ಅಂಬೇಡ್ಕರ್‌ ಆರ್ಟ್ಸ್ ಮತ್ತು ನ್ಪೋರ್ಟ್ಸ್ ಕ್ಲಬ್‌ ವತಿಯಿಂದ ನಡೆಯುವ ಕಾಲ್ಚೆಂಡು ಪಂದ್ಯಾಟಕ್ಕೆ ಚಾಲನೆ ದೊರೆಯಿತು. ಪಾಲಿಬೆಟ್ಟದ ಟಾಟಾ ಕಾಫಿ ಗಾಲ್ಫ್ ಮೈದಾನದಲ್ಲಿ ಟಾಟಾ ಕಾಫಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕೆ.ಜಿ. ರಾಜೀವ್‌ ಉದ್ಘಾಟಿಸಿದರು. ಮೂರು ದಿನಗಳು ನಡೆಯುವ ರಾಜ್ಯ ಮಟ್ಟದ ಪಂದ್ಯಾಟಕ್ಕೆ ರಾಜ್ಯದಾತ್ಯಂತ 26 ತಂಡಗಳು ಭಾಗವಹಿಸಲಿದೆ. ಅಂಬೇಡ್ಕರ್‌ ಸಂಘ,‌ ಪಾಲಿಬೆಟ್ಟ ಮತ್ತು ಕಾವೇರಿ ಕಾಲೇಜು, ಗೋಣಿಕೊಪ್ಪಲು ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ಕಾವೇರಿ ಕಾಲೇಜು ತಂಡ 6 ಗೋಲುಗಳನ್ನು ಅಂಬೇಡ್ಕರ್‌ ತಂಡದ ವಿರುದ್ದ ದಾಖಲಿಸುವ ಮೂಲಕ ಪ್ರಥಮ ಪಂದ್ಯದ ಜಯ ಸಾಧಿಸಿತು.

Advertisement

ಅಂಬೇಡ್ಕರ್‌ ತಂಡವು 3 ಗೋಲುಗಳನ್ನು ಕಾವೇರಿ ಕಾಲೇಜು ತಂಡದ ವಿರುದ್ದ ದಾಖಲಿಸಿ ಸೋಲಿಗೆ ಶರಣಾಯಿತು. ಮುಖ್ಯ ಅತಿಥಿಗಳಾಗಿ ಸಹಾಯಕ ವ್ಯವಸ್ಥಾಪಕ ಸಿ.ಯು. ಆಶೋಕ್‌, ಬಿ. ಸಲೇಶ್‌ ಮೆನನ್‌, ಕಾಫಿ ಬೆಳೆಗಾರ ಕೆ.ಟಿ. ಕಾರ್ಯಪ್ಪ, ಧಾನಿಗಳಾದ ಮುನೀರ್‌, ಸಂಘದ ಅಧ್ಯಕ್ಷ ರಾಜ್‌ ಗೋಪಾಲ್‌, ಕಾರ್ಯದರ್ಶಿ ಲಕ್ಷ್ಮಣ್‌, ಗೌರವಾಧ್ಯಕ್ಷ ಹೆಚ್‌.ಎನ್‌. ರಾಜು ಹಾಗೂ ಪದಾಧಿಕಾರಿಗಳು ಉಪಸ್ಥಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next