Advertisement

ರಸ್ತೆ ಸುರಕ್ಷತಾ ಕಾಮಗಾರಿಗೆ ಚಾಲನೆ

12:30 AM Feb 23, 2019 | Team Udayavani |

ಸಿದ್ದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ಬೈಂದೂರು ರಾಜ್ಯ ಹೆದ್ದಾರಿ ಹಾಲ್ಕಲ್‌ ಭಾಗದಲ್ಲಿ 1 ಕೋ.ರೂ. ವೆಚ್ಚದ ರಸ್ತೆ ಸುರಕ್ಷತಾ ಕಾಮಗಾರಿಗೆ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಚಾಲನೆ ನೀಡಿದರು. 

Advertisement

ಬಳಿಕ ಮಾತನಾಡಿದ ಅವರು, ಕೊಲ್ಲೂರು ದೇವಸ್ಥಾನಕ್ಕೆ ಬೈಂದೂರಿನಿಂದ ಹಾಗೂ ಹೆಮ್ಮಾಡಿಯಿಂದ ಕೊಲ್ಲೂರು ಮಾರ್ಗವಾಗಿ ಸಾವಿರಾರು ವಾಹನಗಳು ಸಂಚರಿಸುತ್ತವೆ.  ಹಾಲ್ಕಲ್‌ ಭಾಗದಲ್ಲಿ ವೃತ್ತದ ಆವಶ್ಯಕತೆಯಿದೆ. ಆ ಉದ್ದೇಶಕ್ಕೆ ಅಲ್ಲಲ್ಲಿ ತಿರುವುಗಳನ್ನು ನೇರ ರಸ್ತೆಗಳನ್ನಾಗಿ ಪರಿವರ್ತಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ವೃತ್ತದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಜಡ್ಕಲ್‌ ಗ್ರಾ.ಪಂ. ಅಧ್ಯಕ್ಷ ಅನಂತಮೂರ್ತಿ ಭಟ್‌, ಶ್ರೀನಿವಾಸ ಆಚಾರ್‌, ತಂಗಪ್ಪನ್‌, ವಿಶ್ವನಾಥನ್‌, ನಾರಾಯಣ ಶೆಟ್ಟಿ, ಹರೀಶ್‌ ಜಡ್ಕಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next