Advertisement

ಕಾರ್ಮಿಕ ಪಿಂಚಣಿ ಯೋಜನೆಗೆ ಚಾಲನೆ

09:51 PM Jan 16, 2022 | Team Udayavani |

ಬಾಗಲಕೋಟೆ: ಕಾರ್ಮಿಕ ಇಲಾಖೆ ಅಡಿಯಲ್ಲಿ ನಗರದ ವಾರ್ಡ ನಂ.9ರ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌-ಧನ್‌ ಯೋಜನೆ ದೇಶದ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆಗೆ ಗುರುತಿನ ಕಾರ್ಮಿಕ ಕಾರ್ಡ್‌ ನೀಡುವ ಕಾರ್ಯಕ್ರಮಕ್ಕೆ ಶಾಸಕ ಡಾ|ವೀರಣ್ಣ ಚರಂತಿಮಠ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಶಾಸಕರು, ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರಮಯೋಗಿ ಮಾನ್‌-ಧನ್‌ ಎಂಬ ಮಹಾತ್ವಾಂಕ್ಷಿ ವಂತಿಕೆ ಆಧಾರಿತ ಪಿಂಚಣಿ ಯೋಜನೆ ಜಾರಿಗೆ ತಂದಿದ್ದಾರೆ. ಎಲ್ಲ ಅಸಂಘಟಿತ ಕಾರ್ಮಿಕರು ಅದರ ಸದುಪಯೋಗಪಡಿಸಿಕೊಳ್ಳಲು ವಿನಂತಿಸಿದರು.

ಕಾರ್ಮಿಕ ಇಲಾಖೆ ಅಧಿ ಕಾರಿ ಬಿ.ಆರ್‌. ಜಾಧವ, ಮಾಜಿ ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಂಕುಪ್ಪ, ನಗರಸಭೆ ಸದಸ್ಯ ಪ್ರೇಮಾ ಮಾನೇಶ ಅಂಬಿಗೇರ, ಪಾಂಡಪ್ಪ ಅಂಬಿಗೇರ, ಸಂಜೀವ ಡಿಗ್ಗಿ, ಶಂಕರ ಗಲಗ, ಮಾನೇಶ ಅಂಬಿಗೇರ, ಈರಣ್ಣ ಅತೂ°ರ, ಈರಣ್ಣ ಮುಡಂರಗಿ, ಪರಶುರಾಮ ಬುಳ್ಳಾಪುರ, ಶಾಂತು ಗಲಗ ಉಪಸ್ಥಿತರಿದ್ದರು

 

Advertisement

Udayavani is now on Telegram. Click here to join our channel and stay updated with the latest news.

Next