Advertisement

ಪ್ರತಿ ಮನೆಗೆ ಕುಡಿವ ನೀರಿನ ವ್ಯವಸ್ಥೆ

04:28 PM Feb 01, 2021 | Team Udayavani |

ಶಿಗ್ಗಾವಿ: ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷೆಯಂತೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಜೀವಜಲ ದೊರೆಯುವಂತಾಗಬೇಕೆಂದು ಜಲಜೀವನ ಮಿಷನ್‌ ಯೋಜನೆಯಡಿ ನೀರಿನ ಕೊರತೆ ಇರುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಆ ಗ್ರಾಮದ ಪ್ರತಿ ಮನೆಗೆ ಕುಡಿಯುವ ನೀರಿನ ನಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ತಾಲೂಕಿನ ಕಡಹಳ್ಳಿ ಗ್ರಾಮದಲ್ಲಿಜಲಜೀವನ ಮಿಷನ್‌ ಯೋಜನೆಯಡಿ  ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಹಿರೇಮಲ್ಲೂರ ಗ್ರಾಮದಿಂದ ಕಡಹಳ್ಳಿ ಗ್ರಾಮದವರೆಗೆ 57 ಕೋಟಿ ರೂ. ಅನುದಾನದಲ್ಲಿ 60 ಗ್ರಾಮಗಳ ಮನೆಗಳಿಗೆ ಶುದ್ಧ ಕುಡಿಯುವ ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗುವುದು. ಗ್ರಾಮದ ಜನತೆ ಇದರ ಸದುಪಯೋಗ ಪಡೆದುಕೊಳ್ಳುಬೇಕು. ಹಾಗೂ ಕಡಹಳ್ಳಿ ಗ್ರಾಮದ ಶಿಥಿಲಗೊಂಡ ಗವಿಸಿದ್ದೇಶ್ವರ ದೇವಸ್ಥಾನ ಮತ್ತು ಹನುಮಾನ ದೇವಸ್ಥಾನವನ್ನು ತಮ್ಮ ವೈಯುಕ್ತಿಕ ಅನುದಾನದಡಿ ನಿರ್ಮಿಸುವುದಾಗಿ ಭರವಸೆ ನೀಡಿದರು.

ಜಿಲ್ಲಾ ಕಾರ್ಯನಿರ್ವಾಹಕ ಅಧಿ ಕಾರಿ ರೋಷನ್‌ಬೇಗ್‌ ಮಾತ ನಾಡಿ, ಜಲಜೀವನ ಮೀಷನ್‌ ಯೋಜನೆಯನ್ನು ತಾಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ 99 ಹಳ್ಳಿಗಳಿಗೆ ಪೈಪ್‌ ಮುಖಾಂತರ ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ಜನಪ್ರಿಯತೆ ಕುಂದಿದ್ದರಿಂದ ಉದ್ಧವ್‌ ಕಿತಾಪತಿ: ಸೋಮಣ್ಣ

ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷೆ ವಿಜಯಲಕ್ಷಿ ಮುಂದಿನ ಮನಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಅರ್ಜುನ ಹಂಚಿನಮನಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಬಸನಗೌಡ ರಾಮನಗೌಡ್ರ, ಸಿದ್ದಣ್ಣ ಮಸಳಿ, ಶಂಕ್ರಣ್ಣ ಮುಂದಿನಮನಿ, ನ್ಯಾಯವಾದಿ ಜಿ.ಎ. ಹಿರೇಮಠ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ ತುರಕಾಣಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅ ಧಿಕಾರಿಗಳು, ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next