Advertisement

ಇನ್ನೂ ದೊರಕಿಲ್ಲ ಸಮಸ್ಯೆಗೆ ಪರಿಹಾರ : ವಿದ್ಯಾದೇಗುಲದ ಎದುರೇ ಕೊಳಚೆ ನೀರು  

04:24 PM Feb 15, 2022 | Team Udayavani |

ಬಿಕರ್ನಕಟ್ಟೆ : ನಂತೂರು ಬಳಿಯ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪದವು, ಬಿಕರ್ನಕಟ್ಟೆ ಶಾಲೆಯ ಮುಂಭಾಗ ಕೆಲ ತಿಂಗಳಿನಿಂದ ಗಲೀಜು ನೀರು ಹರಿಯು ತ್ತಿದ್ದು, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಶಾಲೆಯ ಮುಂಭಾಗದಲ್ಲಿ ಇನ್ನೂ ಗಲೀಜು ನೀರು ಹರಿಯುತ್ತಿದೆ. ಇದರಿಂ ದಾಗಿ ಶಾಲೆಯ ಮಕ್ಕಳಿಗೆ ತೊಂದರೆ ಉಂಟಾ ಗುತ್ತಿದೆ. ಗಲೀಜು ನೀರಿನ ಪರಿಣಾಮ ಸುತ್ತಮುತ್ತಲು ಸೊಳ್ಳೆ ಕಾಟ ಹೆಚ್ಚಾಗುತ್ತಿದ್ದು, ಈ ಸಮಸ್ಯೆಗೆ ಮಹಾನಗರ ಪಾಲಿಕೆ ಸೂಕ್ತ ಕ್ರಮಕೈಗೊಳ್ಳಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

Advertisement

ವಿದ್ಯಾದೇಗುಲದ ಎದುರೇ ಕೊಳಚೆ ನೀರು …. ಸುತ್ತಲಿನ ಪರಿಸರ ಗಬ್ಬು ವಾಸನೆ ಎಂಬ ಬಗ್ಗೆ “ಉದಯವಾಣಿ ಸುದಿನ’ದಲ್ಲಿ ಕೆಲ ದಿನಗಳ ಹಿಂದೆ ವಿಶೇಷ ವರದಿ ಪ್ರಕಟಿಸಲಾಗಿತ್ತು. ಮರು ದಿನವೇ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ರೀತಿ ಗಲೀಜು ನೀರು ರಸ್ತೆಗೆ ಬಿಡುವ ವಸತಿ ಸಮುಚ್ಚಯ, ಮನೆಗಳಿಗೆ ಸೂಚನೆ ನೀಡಿದ್ದರು. ಬಳಿಕ ಈ ಪ್ರದೇಶದಲ್ಲಿ ಸ್ವತ್ಛತೆ ಕೆಲಸ ನಿರ್ವಹಿಸಿದ್ದರು. ಇದೀಗ ಇನ್ನೂ ಆ ಭಾಗದಲ್ಲಿ ಸಮಸ್ಯೆ ಪೂರ್ಣ ಪ್ರಮಾಣದ ಪರಿಹಾರವಾಗಿಲ್ಲ. ಪಾಲಿಕೆ ಅಧಿಕಾರಿಗಳು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಈ ಭಾಗದಲ್ಲಿ ವಸತಿ ಸಮುಚ್ಚಯ ಸಹಿತ ಕೆಲವೊಂದು ಮನೆಗಳಿಂದ ಗಲೀಜು ನೀರು ರಸ್ತೆಗೆ ಬಿಡುತ್ತಿದ್ದಾರೆ. ಈ ಕುರಿತಂತೆ ಈಗಾಗಲೇ ಆ ಮನೆಯವರಿಗೆ ಸೂಚನೆ ನೀಡಲಾಗಿದೆ. ಶಾಲೆಯ ಎದುರು ಗಲೀಜು ನೀರು ಹರಿಯುತ್ತಿರುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ‘ಹಿಜಾಬ್ ಧರಿಸಿಯೇ  ತರಗತಿಗೆ ಹಾಜರಾಗುತ್ತೇವೆ’:ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next