Advertisement

ನಾಟಕ ರೂಪ ಪಡೆದ “ಹೌದು ಹುಲಿಯಾ’

10:49 PM Dec 27, 2019 | Lakshmi GovindaRaj |

ಬಾದಾಮಿ: ಕಾಗವಾಡ ಉಪಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಭಾಷಣದ ವೇಳೆ ಕೇಳಿ ಬಂದ “ಹೌದು ಹುಲಿಯಾ’ ಸಂಭಾಷಣೆ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಸಿದ್ದರಾಮಯ್ಯ ಕೂಡ ಇದರ ಜನಪ್ರಿಯತೆಯನ್ನು ಒಪ್ಪಿಕೊಂಡಿದ್ದರು.

Advertisement

ಈಗ ಇದೇ ಸಂಭಾಷಣೆ ಆಧರಿಸಿದ್ದ ರಾಮಯ್ಯ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ “ಹೌದ್ದ ಹುಲಿಯಾ’ ನಾಟಕವೊಂದು ಪ್ರದರ್ಶನಕ್ಕೆ ಸಿದ್ಧಗೊಂಡಿದೆ. ಸಿದ್ದರಾಮಯ್ಯ ಹೋದ ಲ್ಲೆಲ್ಲ ಕೇಳಿ ಬರುತ್ತಿದ್ದ “ಹೌದು ಹುಲಿಯಾ’ ಡೈಲಾಗ್‌ ಸಿದ್ದ ರಾಮಯ್ಯಗೆ ಮಾತ್ರವಲ್ಲದೇ, ಇದನ್ನು ಹೇಳಿದ್ದ ಪೀರಪ್ಪನಿಗೂ ಜನಪ್ರಿಯತೆ ತಂದು ಕೊಟ್ಟಿತ್ತು.

ಅದರ ಪ್ರಖ್ಯಾತಿ ಕಂಡು ಮಹೇಶ ಕಲ್ಲೋಳರ “ಹೌದ್ದ ಹುಲಿಯಾ’ ಶೀರ್ಷಿಕೆಯಲ್ಲಿ ನಾಟಕ ರಚಿಸಿದ್ದಾರೆ. ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘದ ವತಿಯಿಂದ ಪ್ರದರ್ಶನಗೊಳ್ಳಲಿದೆ. ಜ.9 ರಿಂದ ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಒಂದು ತಿಂಗಳು ಜಾತ್ರಾ ಮಹೋತ್ಸವದಲ್ಲಿ ನಿತ್ಯ ಮೂರು ಪ್ರದರ್ಶನ ಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next