Advertisement

ನಾಟಕ ಸ್ಪರ್ಧೆ ಫ‌ಲಿತಾಂಶ ಪ್ರಕಟ

12:21 PM Mar 26, 2019 | Lakshmi GovindaRaju |

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ, 2018  -19ನೇ ಸಾಲಿನ ನಾಟಕ ಸ್ಪರ್ಧೆಯ ಫ‌ಲಿತಾಂಶ ಪ್ರಕಟಿಸಿದೆ. ಬೆಂಗಳೂರಿನ ಎನ್‌.ಸಿ.ಮಹೇಶ್‌ ಅವರ”ಸಾಕು ತಂದೆ ರೂಮಿ’, ಡಾ.ನಟರಾಜ್‌ ತಲಘಟ್ಟಪುರ ಅವರ “ಬಯಲರೂಪ’,ಉಷಾ ಕಟ್ಟೆಮನೆ ಅವರ “ಕೋಡªಬ್ಬ ತನ್ನಿಮಾನಿಗ’ ನಾಟಕ ಪ್ರಶಸ್ತಿಗೆ ಭಾಜನವಾಗಿವೆ.

Advertisement

ಹಾಗೆಯೇ ವಿದ್ಯಾರ್ಥಿ ವಿಭಾಗದಲ್ಲಿ ಕುಪ್ಪಳ್ಳಿಯ ನಮನ ಬಿ.ಎನ್‌.ರಚನೆಯ”ನಡುವೆ ಸುಳಿವಾತ್ಮ’ ನಾಟಕಕ್ಕೆ ಪ್ರಶಸ್ತಿ ಸಂದಿದೆ. ಪ್ರಶಸ್ತಿ ತಲಾ.20 ಸಾವಿರ ರೂ.ನಗದು ಮತ್ತು ಸನ್ಮಾನ ಒಳಗೊಂಡಿದ್ದು ಮಾ.27 ರಂದು ನಯನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್‌ ಮಾತನಾಡಿ, ಫ‌ಲಿತಾಂಶ ಪ್ರಕಟಿಸುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ. ಪೂರ್ವಭಾವಿಯಾಗಿ ಚುನಾವಣಾ ಆಯೋಗದಿಂದ ಅನುಮತಿ ಪಡೆದಿರುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next