Advertisement
ಉಜಿರೆ ಶಾಲೆ ಬಳಿಶೈಕ್ಷಣಿಕ ನಗರಿ ಉಜಿರೆ ಗ್ರಾಮ ಬೆಳೆದಂತೆ ಸಮಸ್ಯೆಗಳೂ ಬೆಳೆಯುತ್ತಿದೆ. ರಾ.ಹೆ. ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತಿದೆ. ಕೆಸರು ನೀರು ಪಾದಚಾರಿಗಳಿಗೆ ರಾಚಿ ಕೆಸರುಮಯಗೊಳಿಸುತ್ತಿದೆ. ವಾಹನ ಸಂಚಾರಕ್ಕೂತೊಡಕುಂಟಾಗುತ್ತಿದೆ.
ಉಜಿರೆ ಗ್ರಾ. ಪಂ.ನ ವತಿಯಿಂದ ಶುಕ್ರವಾರ ಉಜಿರೆಯ ಕೆಲವು ಕಡೆಗಳಲ್ಲಿ ಚರಂಡಿಯಲ್ಲಿದ್ದ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸಮರ್ಪಕವಾಗಿ ನೀರು ಹರಿದು ಹೋಗುವಂತೆ ಸರಿಪಡಿಸಲಾಯಿತು. ನಾಗರಿಕರು ರಸ್ತೆ ಬದಿಯ ಚರಂಡಿಗಳಿಗೆ ತ್ಯಾಜ್ಯಗಳನ್ನು ಎಸೆಯುವುದರಿಂದ ಮಳೆಗಾಲದಲ್ಲಿ ನೀರು ಸರಿಯಾಗಿ ಹರಿದು ಹೋಗದೆ ಇಂತಹ ಸಮಸ್ಯೆ ಎದುರಾಗುತ್ತಿದೆ. ತ್ಯಾಜ್ಯಗಳನ್ನು ಚರಂಡಿಗೆ ತಂದು ಸುರಿಯುವ ಬದಲು ಸೂಕ್ತ ರೀತಿಯಲ್ಲಿ ತಮ್ಮ ಮನೆಯಲ್ಲಿಯೇ ವಿಲೇ ಮಾಡಿದರೆ ಇಂತಹ ಪರಿಸ್ಥಿತಿ ಮರುಕಳಿಸಲು ಸಾಧ್ಯವಿಲ್ಲ. ನಿಡಿಗಲ್ ಸೇತುವೆ
ಕಲ್ಮಂಜ ಗ್ರಾಮದ ನಿಡಿಗಲ್ ಸೇತುವೆ ಮೇಲೆ ಮಳೆ ನೀರು ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಸೇತುವೆ ಮೇಲೆ ಶೇಖರಣೆಯಾಗುವ ನೀರಿನಿಂದ ದ್ವಿಚಕ್ರ ವಾಹನದವರಿಗೆ ಘನ ವಾಹನದವರಿಂದ ನೀರ ಸಿಂಚನವಾಗುತ್ತಿದೆ. ಮೊದಲೇ ಇಕ್ಕಟ್ಟಾದ ಈ ಸೇತುವೆಯ ಮೇಲೆ ಘನ ವಾಹನಗಳು ಸಂಚರಿಸುವಾಗ ದ್ವಿಚಕ್ರ ಸವಾರರಿಗೆ, ಪಾದಚಾರಿಗಳಿಗೆ ಕೆಸರು ನೀರಿನ ಸಿಂಚನವಾಗುತ್ತಿದೆ. ನೂತನ ಸೇತುವೆ ನಿರ್ಮಾಣವಾಗುತ್ತಿದೆ. ಶಿರಾಡಿ ಘಾಟಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಚಾರ್ಮಾಡಿ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿದ್ದು, ಕೆಲವೆಡೆ ಮೋರಿ ಶಿಥಿಲಗೊಂಡಿದೆ.
Related Articles
ಉಜಿರೆಯಲ್ಲಿ ನಿರಂತರ ನೀರು ನಿಲ್ಲುವ ಸಮಸ್ಯೆ ಉಂಟಾಗುತ್ತಿತ್ತು. ಶನಿವಾರವೂ ಪೆಟ್ರೋಲ್ ಪಂಪ್ ಬಳಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಚರಂಡಿಗೆ ಹಾಕಿರುವ ಕೊಳವೆಗಳಲ್ಲಿ ಕಸಗಳು ಸಿಲುಕಿ ಹಾಗೂ ಕಸದಿಂದ ಚರಂಡಿ ಬ್ಲಾಕ್ ಆಗುವ ಕಾರಣ ಸಮಸ್ಯೆ ಹೆಚ್ಚಳವಾಗುತ್ತಿದೆ. ಇದೀಗ ಉಜಿರೆ ಪಿಡಿಒ ಗಾಯತ್ರಿ ಮತ್ತು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿ ಚರಂಡಿಯ ಹೂಳೆತ್ತಲು ಸೂಚನೆ ನೀಡಿದರು. ಆದ್ದರಿಂದ ಕಾಮಗಾರಿ ಆರಂಭವಾಗಿದೆ.
Advertisement
ಗುರು ಮುಂಡಾಜೆ