Advertisement

ಮನ್ನಡ್ಕಪಾದೆ: ಮೋರಿ ನಿರ್ಮಾಣ ಕಾರ್ಯ

01:20 AM Dec 11, 2018 | Karthik A |

ಬೆಳ್ತಂಗಡಿ: ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕಕ್ಕಿಂಜೆ-ನೆರಿಯ ರಸ್ತೆಯ ಮನ್ನಡ್ಕಪಾದೆಯಲ್ಲಿ ಕೆರೆಯ ಒಸರಿನ ನೀರು ಕೊಳಚೆ ನೀರಿನ ರಸ್ತೆಗೆ ಸೇರುತ್ತಿದ್ದ ಹಿನ್ನೆಲೆಯಲ್ಲಿ ರವಿವಾರ ರಸ್ತೆಗೆ ಅಡ್ಡಲಾಗಿ ಮೋರಿ ನಿರ್ಮಾಣ ಕಾರ್ಯ ನಡೆದಿದೆ. ಮನ್ನಡ್ಕಪಾದೆಯಲ್ಲಿರುವ ಕೊಳಚೆ ನೀರು ರಸ್ತೆಗೆ ಸೇರುತ್ತದೆ ಎಂದು ಸಂಬಂಧಪಟ್ಟವರಿಗೆ ದೂರು ನೀಡಿದ್ದರು. ಈ ಕುರಿತು ಪರಿಶೀಲಿಸಿದ ಗ್ರಾ.ಪಂ. ಕೆರೆಯಿಂದ ಒಸರಿನ ನೀರು ಸ್ಥಳೀಯ ಹೊಟೇಲಿನ ಕೊಳಚೆ ನೀರಿನ ಜತೆಗೆ ರಸ್ತೆ ಬರುತ್ತಿದೆ ಎಂದು ತಿಳಿಸಿತ್ತು. ಈ ಕುರಿತು ಉದಯವಾಣಿ ಸುದಿನದಲ್ಲೂ ಸಚಿತ್ರ ವರದಿ ಪ್ರಕಟಗೊಂಡಿತ್ತು. ಈ ಹಿಂದೆಯೇ ಲೋಕೋಪಯೋಗಿ ಅಧಿಕಾರಿ ಪರಿಶೀಲನೆ ನಡೆಸಿದ್ದರು ಎಂದು ಚಾರ್ಮಾಡಿ ಗ್ರಾ.ಪಂ. ಪಿಡಿಒ ತಿಳಿಸಿದ್ದರು. ಹೀಗಾಗಿ ಪ್ರಸ್ತುತ ಗ್ರಾ.ಪಂ.ನ ಒತ್ತಡದ ಹಿನ್ನೆಲೆಯಲ್ಲಿ ಮೋರಿ ನಿರ್ಮಾಣ ಕಾರ್ಯ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next