Advertisement

ರಾಹುಲ್‌ ಹೆಜ್ಜೆ ಇಟ್ಟ ಕಡೆ ಕಾಂಗ್ರೆಸ್‌ಗೆ ಸೋಲು

03:25 PM Apr 05, 2023 | Team Udayavani |

ಕೋಲಾರ: ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಏ.8ರಂದು ಘೋಷಣೆ ಯಾಗಲಿದ್ದು, ಜಿಲ್ಲೆಯಲ್ಲಿ ಕನಿಷ್ಠ 4 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಶತಸಿದ್ಧವಾಗಿದೆ ಎಂದ ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ರಾಹುಲ್‌ ಗಾಂಧಿ ಪಾದಸ್ಪರ್ಶವಾದ ಕಡೆಗಳೆಲ್ಲೆಲ್ಲಾ ಕಾಂಗ್ರೆಸ್‌ಗೆ ಸೋಲಾಗುವುದರಿಂದ ಅವರಿಗೆ ಮುಕ್ತ ಆಹ್ವಾನ ನೀಡುತ್ತೇವೆ ಎಂದರು.

Advertisement

ನಗರ ಹೊರವಲಯದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ, ನಗರ ಭಾಗದ ಸಂಘಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿದೇಶಗಳಲ್ಲಿ ಹೋಗಿ ಭಾರತದ ಮಾನ ಹರಾಜು ಹಾಕಿರುವ ರಾಹುಲ್‌ ಗಾಂಧಿಯಿಂದ ಜೈಭಾರತ್‌ ಸಮಾವೇಶ ನಡೆಸುತ್ತಿರುವ ಕುರಿತು ವ್ಯಂಗ್ಯವಾಡಿದ ಅವರು, ರಾಹುಲ್‌ಗಾಂಧಿ ಒಂದೆರೆಡು ಬಾರಿಯಲ್ಲ, ಕರ್ನಾಟಕಕ್ಕೆ 50 ಬಾರಿ ಬರಬೇಕು. ಅವರು ಬಂದು ಪ್ರಚಾರ ಮಾಡಿದ ಕಡೆಗಳೆಲ್ಲೆಲ್ಲಾ ಕಾಂಗ್ರೆಸ್‌ಗೆ ಸೋಲಾಗುತ್ತದೆ ಎಂದರು.

ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: 2023ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಕನಿಷ್ಠ 4 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಅದು ಜನರ ನಿರ್ಧಾರ ಎಂದರು.

ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 100ಕ್ಕೆ 100 ಗೆಲುವು ಸಾಧಿಸುವುದು ಶತಃಸಿದ್ಧವಾಗಿದ್ದು, ಅಂತೆಯೇ ಮಾಲೂರು, ಕೆಜಿಎಫ್‌, ಬಂಗಾರಪೇಟೆ ಕ್ಷೇತ್ರ ಗಳಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಆ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು, ಶಕ್ತಿ ಕೇಂದ್ರಗಳ ಪ್ರಮುಖರು, ಎಲ್ಲಾ ಮೋರ್ಚಾಗಳ ಪದಾಕಾರಿಗಳು ಉಳಿದಿರುವ 35 ದಿನಗಳ ಕಾಲ ನಾವೇ ಅಭ್ಯರ್ಥಿಗಳು ಎಂದು ಶ್ರಮಪಬೇಕಾಗಿದೆ. ಡಬಲ್‌ ಎಂಜಿನ್‌ ಸರ್ಕಾರ ಸಾಧನೆಗಳನ್ನು ಮನೆಮನೆಗೂ ತಿಳಿಸುವ ಜೊತೆಗೆ ಜನರ ಮನವೊಲಿಸುವ ಕೆಲಸವೂ ಆಗಬೇಕಿದೆ ಎಂದರು.

Advertisement

ಮತ್ತೂಮ್ಮೆ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಚುನಾವಣೆಗಾಗಿ ಜನರು ಕಾಯು ತ್ತಿದ್ದು, ಹೈಕಮಾಂಡ್‌ ಅಳೆದು ತೂಗಿ ಏ.8ರಂದು ಟಿಕೆಟ್‌ ಘೋಷಣೆ ಮಾಡಲಿದೆ. ಆ ಬಳಿಕ ಇನ್ನಷ್ಟು ಉತ್ಸುಕರಾಗಿ ಕೆಲಸ ಮಾಡಬೇಕೆಂದು ಸೂಚಿಸಿದರು.

ನಾನು ಪಕ್ಷದ ಸಿಪಾಯಿ: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೋಲಾರ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನಾಗಿ ನನ್ನನ್ನು ನೇಮಿಸಲಾಗಿದ್ದು. ಪ್ರತಿ ಹೋಬಳಿ, ಗ್ರಾಪಂ, ಹಳ್ಳಿಗೂ ಹೋಗುತ್ತೇನೆ. ಆದರೆ, ನಾನು ಕೋಲಾರ ಜಿಲ್ಲೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಪಕ್ಷವು ಅವಕಾಶ ಕೊಟ್ಟರೆ ಹೆಬ್ಟಾಳದಲ್ಲಿ ನಿಲ್ಲುವೆ ನಾನು ಎಂದಿಗೂ ಪಕ್ಷದ ಸಿಪಾಯಿ ಎಂದು ತಿಳಿಸಿದರು.

ಸಭೆಯಲ್ಲಿ ಕೆಯುಡಿಎ ಅಧ್ಯಕ್ಷ ವಿಜಯ್‌ ಕುಮಾರ್‌, ಬಿಜೆಪಿ ನಗರ ಘಟಕದ ಅಧ್ಯಕ್ಷ ತಿಮ್ಮ ರಾಯಪ್ಪ, ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ನಿರ್ಮಲಾ, ಅಲ್ಪಸಂಖ್ಯಾತರ ಘಟಕದ ಬೆಗ್ಲಿ ಸಿರಾಜ್‌, ರಾಜೇಶ್‌ಸಿಂಗ್‌ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ವಿರುದ್ಧ ವೈಎಎನ್‌ ಲೇವಡಿ : ರಾಜ್ಯದಲ್ಲಿ 5 ವರ್ಷ ಮುಖ್ಯಮಂತ್ರಿಯಾಗಿ ಮತ್ತೈದು ವರ್ಷ ವಿಪಕ್ಷ ನಾಯಕರಾಗಿದ್ದವರು, ಜನರಿಗೆ ಎಲ್ಲಾ ಭಾಗ್ಯಗಳನ್ನು ಕೊಟ್ಟಿದ್ದೇನೆಂದು ಬೊಗಳೆ ಬಿಡುವ ನಾಯಕರು ಚುನಾವಣೆ ಸಂದರ್ಭದಲ್ಲಿ ಎಲ್ಲಿ ಗೆಲ್ಲುತ್ತೇನೆ, ಅಲ್ಲಿ ನಿಲ್ಲುತ್ತೇನೆ ಎಂದು ಓಡಾಡುತ್ತಿರುವುದು ದುರಂತದ ಸಂಗತಿ ಎಂದು ಸಿದ್ದರಾಮಯ್ಯ ವಿರುದ್ಧ ಡಾ.ವೈ.ಎ.ಎನ್‌. ಲೇವಡಿ ಮಾಡಿದರು.

ಗೆಲ್ಲುವ ಅಪನಂಬಿಕೆಯಿಂದಾಗಿ 2 ಕಡೆ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ, ಒಂದು ಪಕ್ಷದ ರಾಜ್ಯ ನಾಯಕರೆಂದು ಹೇಳಿ ಕೊಳ್ಳುವವರಿಗೆ ಗೆಲುವು ಸಾಧಿಸಲು ಒಂದು ಕ್ಷೇತ್ರವೂ ಸಿಗುತ್ತಿಲ್ಲ. ಹಿಂದೆ ಗೆದ್ದ ಕಡೆ ಈಗ ನಿಲ್ಲಲು ಧೈರ್ಯವಿಲ್ಲ ಏಕೆಂದರೆ ಅಲ್ಲಿನ ಜನರಿಗೆ ಏನೂ ಮಾಡಿಲ್ಲ ಎಂಬುದು ಗೊತ್ತಿರುವುದರಿಂದ ಅಲ್ಲಿ ಮನೆಗೆ ಕಳುಹಿಸುವ ಖಾತ್ರಿ ಭಯ ತರಿಸಿದೆ ಎಂದು ಛೇಡಿಸಿದರು. ‌

ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಭಿಕ್ಷೆ ಬೇಡುವಂತಹ ಸ್ಥಿತಿಗೆ ತಲುಪಿದ್ದಾರೆ ಎಂದು ಛೇಡಿಸಿದ ಅವರು, ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅ ಕಾರಕ್ಕೆ ಬರುವ ಗ್ಯಾರಂಟಿಯೂ ಇಲ್ಲ. ಅದಕ್ಕಾಗಿಯೇ ಜನರಿಗೆ ಗ್ಯಾರಂಟಿ ಕಾರ್ಡ್ ಗಳನ್ನು ನೀಡಲಾಗುತ್ತಿದ್ದು, ಜನರಿಗೂ ಕಾಂಗ್ರೆಸ್‌ ಪಕ್ಷದ ಮೇಲೆ ನಂಬಿಕೆಯೇ ಇಲ್ಲವೆಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next