Advertisement

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ಭೇಟಿ ಮಾಡಿದ ಗಯಾನಾ ಉಪಾಧ್ಯಕ್ಷ

05:32 PM Feb 24, 2023 | Team Udayavani |

ಭರಮಸಾಗರ: ಗಯಾನಾ ದೇಶದ ಭಾರತೀಯ ಸಂಜಾತ ಉಪಾಧ್ಯಕ್ಷ ಭರತ್ ಜಗದೇವ್ ರವರು ನವದೆಹಲಿಯಲ್ಲಿ ಸಿರಿಗೆರೆ ತರಳಬಾಳು ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

Advertisement

ಭೇಟಿ ವೇಳೆ ಗಯಾನಾ ಉಪಾಧ್ಯಕ್ಷರು ಕರ್ನಾಟಕದ ಹಲವು ಜಿಲ್ಲೆ ಗಳಲ್ಲಿ ಜಾರಿಗೆ ತಂದಿರುವ ಏತನೀರಾವರಿ ಯೋಜನೆಗಳ ಮೂಲಕ 500 ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿರುವ ಕುರಿತು ಮಾಹಿತಿ ಪಡೆದರು. ಶ್ರೀ ತರಳಬಾಳು ವಿದ್ಯಾಸಂಸ್ಥೆ ವತಿಯಿಂದ ರಾಜ್ಯ ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಮತ್ತು ದಾಸೋಹ ಪಡೆಯುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣ ಕಲ್ಪಿಸುತ್ತಿರುವ ಡಾ.ಶ್ರೀಗಳ ಕಾರ್ಯವನ್ನು ಶ್ಲಾಘಿಸಿದರು.

ಗಯಾನಾ ದೇಶದಲ್ಲಿ ನಡೆಯಲಿರುವ ಸರ್ಕಾರಿ ವಿಶೇಷ ಕಾರ್ಯಕ್ರಮಗಳಿಗೆ ಪೂಜ್ಯ ಡಾ.ಶ್ರೀಗಳಿಗೆ ಭರತ್ ಜಗದೇವ್ ರವರು ಅಧಿಕೃತ ವಾಗಿ ಆಹ್ವಾನಿಸಿದರು.

ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ ಶ್ರೀನಿವಾಸ್, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್ ಇತರರಿದ್ದರು.

ಇದನ್ನೂ ಓದಿ: ಸಿಎಂ ಶಿಂಧೆ ಪುತ್ರನ ವಿರುದ್ಧ ಆರೋಪ: ಸಂಜಯ್ ರಾವತ್ ವಿರುದ್ಧ ಮತ್ತೊಂದು ಮಾನನಷ್ಟ ಕೇಸ್

Advertisement
Advertisement

Udayavani is now on Telegram. Click here to join our channel and stay updated with the latest news.

Next