Advertisement

ಧರ್ಮಸ್ಥಳ ಮೇಳದ  ಚೌಕಿಗೆ ಡಾ|ಹೆಗ್ಗಡೆ ಭೇಟಿ

12:50 AM Jan 21, 2019 | Team Udayavani |

ಕೋಟ: ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಜ.19ರಂದು ಕುಂದಾಪುರಕ್ಕೆ ಭೇಟಿ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ರಾತ್ರಿ  ಹಿಂದಿರುಗುವ ಸಂದರ್ಭ ಯಾವುದೇ  ಅನಿರೀಕ್ಷಿತವಾಗಿ ಕೋಟ ಹಾಡಿಕೆರೆ ಶನೀಶ್ವರ ದೇಸ್ಥಾನದ ಸಮೀಪ ನಡೆಯುತ್ತಿದ್ದ  ಧರ್ಮಸ್ಥಳ ಮೇಳದ ಯಕ್ಷಗಾನ ಪ್ರದರ್ಶನ ಸ್ಥಳಕ್ಕೆ ಭೇಟಿ ನೀಡಿದರು.ನೇರವಾಗಿ ಯಕ್ಷಗಾನ ಮೇಳದ ಚೌಕಿಗೆ ತೆರಳಿದ ಹೆಗ್ಗಡೆಯವರು ಗಣಪತಿಗೆ ವಂದಿಸಿ, ಮೇಳದ ಕಲಾವಿದರಾದ ಕುಂಬ್ಳೆ ಶ್ರೀಧರ ರಾವ್‌, ಗೋವಿಂದ ಭಟ್‌ ಸೇರಿದಂತೆ ಎಲ್ಲ ಕಲಾವಿದರನ್ನು ಮಾತನಾಡಿಸಿ. ಯೋಗಕ್ಷೇಮ  ಹಾಗೂ ಪ್ರದರ್ಶನದ ಕುರಿತು ವಿಚಾರಿಸಿದರು.  ಅನಂತರ ಭಕ್ತರನ್ನು ಆಶೀರ್ವದಿಸಿದರು. ಸೇವಾಕರ್ತರ ಮನವಿಯ ಮೇರೆಗೆ ಅಲ್ಲೇ ಪಕ್ಕದಲ್ಲಿದ್ದ ಶನೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಸೇವಾಕರ್ತರಾದ ರಾಮಸ್ವಾಮಿ ಹಾಗೂ  ಕುಟುಂಬದವರು ಮತ್ತು  ಮೇಳದ ಪ್ರಬಂಧಕರಾದ ಪುಷ್ಪರಾಜ್‌ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next