Advertisement

ಬೆಳಗಾವಿ ಕುರಿತಾದ ಅಜಿತ್ ಪವಾರ್ ಹೇಳಿಕೆ ಉದ್ಧಟತನದ ಪ್ರತೀಕ : ಡಾ. ಸಿ. ಸೋಮಶೇಖರ

10:47 PM Jan 17, 2021 | Suhan S |

ಬೆಂಗಳೂರು : ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬೆಳಗಾವಿ ಕುರಿತಾದ ಹೇಳಿಕೆ ಅವರ ಉದ್ಧಟತನದ ಪ್ರತೀಕ. ಮಹಾಜನ್ ಆಯೋಗದ ತೀರ್ಪೆ ಅಂತಿಮ. ಬೆಳಗಾವಿಯಲ್ಲಿನ ಜನರೆಲ್ಲರೂ ಕನ್ನಡ ಮನಸ್ಸುಳ್ಳ ನಮ್ಮ ಸಹೋದರರು. ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ಬೆಳಗಾವಿ ಕನ್ನಡ ನಾಡಿನ ಅವಿಭಾಜ್ಯ ಭಾಗ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿರುವ ಡಾ. ಸಿ. ಸೋಮಶೇಖರ ಹೇಳಿದರು.

Advertisement

ಕನ್ನಡ ನಾಡಿನ ಅಖಂಡತೆಯ ಬಗ್ಗೆ ಅಪಸ್ವರ ಎತ್ತುವವರಿಗೆ ಎಚ್ಚರಿಕೆ. ಅಜಿತ್ ಪವಾರ್ ಅವರ ಹೇಳಿಕೆಯನ್ನು ನಮ್ಮ ಮುಖ್ಯಮಂತ್ರಿಗಳು ಈಗಾಗಲೇ ಬಹಳ ಗಟ್ಟಿ ಧ್ವನಿಯಲ್ಲಿ ಖಂಡಿಸಿದ್ದಾರೆ. ಇತ್ಯರ್ಥ ಆಗಿರುವ ವಿಷಯಗಳ ಬಗ್ಗೆ ಅನಗತ್ಯ ತಗಾದೆ ತೆಗೆದು ಬೆಳಗಾವಿಯಲ್ಲಿ ಸೌಹಾರ್ದತೆಯಿಂದ ಸಹ ಬಾಳ್ವೆ ನಡೆಸುತ್ತಿರುವ ಭಾಷೆ ಮರಾಠಿಯಾದರು ಕನ್ನಡ ಅಸ್ಮಿತೆ ಕಾಪಾಡಿಕೊಂಡು ಬಂದಿರುವ ನಮ್ಮ ಸಹೋದರರಲ್ಲಿ ವಿಷ ಬೀಜ ಬಿತ್ತುವುದನ್ನು ನಾವು ಸಹಿಸುವುದಿಲ್ಲ ಎಂದರು.

 

 

Advertisement

Udayavani is now on Telegram. Click here to join our channel and stay updated with the latest news.

Next