Advertisement

ಸ್ತನ ಕ್ಯಾನ್ಸರ್‌ ಜಾಗೃತಿಗೆ ಡಾ|ಬಲ್ಲಾಳ್‌ ಕರೆ

11:49 AM Feb 25, 2017 | Team Udayavani |

ಉಡುಪಿ: ಸ್ತನ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ರೋಗ ಪತ್ತೆ ಕುರಿತು ಸೂಕ್ತ ಜಾಗೃತಿ ಮೂಡಿಸಿ ಸಮಸ್ಯೆ ಇಳಿಮುಖಗೊಳಿಸಬೇಕಾಗಿದೆ ಎಂದು ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಕರೆ ನೀಡಿದರು. 

Advertisement

ಮಣಿಪಾಲ ವಿ.ವಿ.ಯಲ್ಲಿ ಸೆಂಟರ್‌ ಆಫ್ ಕಮ್ಯುನಿಟಿ ಆಂಕಾಲಜಿ, ಸ್ಕೂಲ್‌ ಆಫ್ ಲೈಫ್ ಸೈನ್ಸಸ್‌ (ಎಸ್‌ಎಲ್‌ಎಸ್‌), ಅಮೆರಿಕದ ಕೆಂಟುಕಿ ವಿ.ವಿ. ಮರ್ಕಿಯ ಕ್ಯಾನ್ಸರ್‌ ಸೆಂಟರ್‌ ಸಹಯೋಗದಲ್ಲಿ ಗುರುವಾರ ನಡೆದ “ಬ್ರೆಸ್ಟ್‌ ಕ್ಯಾನ್ಸರ್‌ ಎವಿಡೆನ್ಸ್‌ ಅಪ್‌ಡೇಟ್‌’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ಮಮೋಗ್ರಫಿ ಮೂಲಕ ಕ್ಯಾನ್ಸರ್‌ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು ಎಂದರು. 

ಯೇನಪೊಯ ವಿ.ವಿ. ಕುಲಪತಿ ಡಾ| ಎಂ. ವಿಜಯಕುಮಾರ್‌, ಮರ್ಕಿ ಕ್ಯಾನ್ಸರ್‌ ಸೆಂಟರ್‌ ಸಹ ನಿರ್ದೇಶಕ ಡಾ| ವಿವೇಕ್‌ ರಂಗನೇಕರ್‌, ಮಣಿಪಾಲ ಕೆಎಂಸಿ ಡೀನ್‌ ಡಾ| ಪೂರ್ಣಿಮಾ ಬಾಳಿಗ, ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ|
ಎಂ. ದಯಾನಂದ ಉಪಸ್ಥಿತರಿದ್ದರು. 

ಸೆಂಟರ್‌ ಆಫ್ ಕಮ್ಯುನಿಟಿ ಆಂಕಾಲಜಿ ನಿರ್ದೇಶಕಿ ಡಾ| ಸುಮಾ ನಾಯರ್‌ ಸ್ವಾಗತಿಸಿ ಎಸ್‌ಎಲ್‌ಎಸ್‌ನ ಸಂದೀಪ್‌ ಮಲ್ಯ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next