Advertisement

ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ|ಭರತ್‌ ಶೆಟ್ಟಿ ವೈ

01:45 AM Apr 18, 2021 | Team Udayavani |

ಆರೋಗ್ಯದ ವಿಚಾರ ಬಂದಾಗ ನಮ್ಮ ದೇಶದ, ರಾಜ್ಯದ, ನನ್ನ ಕ್ಷೇತ್ರದ ಜನರ ಹಿತಾಸಕ್ತಿಯೇ ನಮಗೆ ಮುಖ್ಯವಾಗಿದ್ದು, ಜನರಲ್ಲಿ ಆತಂಕ ಮತ್ತು ಭಯ ಹುಟ್ಟಿಸುವ ಯಾವ ಉದ್ದೇಶವೂ ನಮ್ಮ ಸರಕಾರದ್ದಲ್ಲ.

Advertisement

ಆರೋಗ್ಯ ರಕ್ಷಣೆ ನಮ್ಮಲ್ಲರ ಪ್ರಥಮ ಆದ್ಯತೆಯಾಗಬೇಕು. ಯಾವುದೇ ಕಾನೂನು ಜನರನ್ನು ತೊಂದರೆಗೀಡು ಮಾಡಲು ಅಲ್ಲ. ಕಾನೂನು, ಲಾಕ್‌ಡೌನ್‌ ಏನಿದ್ದರೂ ಸರಕಾರದ ಕೊನೆಯ ಅಸ್ತ್ರವಾಗಿದೆ.

ಜನರು ಸ್ವಯಂ ಪ್ರೇರಿತರಾಗಿ ಜಾಗೃತರಾಗಿದ್ದಾಗ ಕೊರೊನಾವನ್ನು ಮೆಟ್ಟಿ ನಿಲ್ಲಲು ಸಾಧ್ಯವಿದೆ. ಕೊರೊನಾಗೆ ತುತ್ತಾಗುವವರು ಯಾರು ಸೋಂಕಿತ ಹತ್ತಿರವಿದ್ದಾಗ, ಹತ್ತಿರ ಬಂದಾಗ, ಆತ ಮುಟ್ಟಿದ ವಸ್ತುಗಳನ್ನು ಮುಟ್ಟಿದಾಗ ಅಲ್ಲವೇ? ಇದನ್ನೇ ನಾವು ದೂರ ಮಾಡಿದರೆ? ಇದು ನಮ್ಮಿಂದ ಸಾಧ್ಯ. ಅನಗತ್ಯವಾಗಿ ಓಡಾಟ, ಏನೂ ಆಗುವುದಿಲ್ಲ ಎಂಬ ಭಂಡ ಧೈರ್ಯ ತೋರಿಸುವ ಸಮಯವಲ್ಲ. ಯಾವುದೇ ಜನ ಜಾತ್ರೆ, ಕಾರ್ಯಕ್ರಮ, ಜನರನ್ನು ಒಟ್ಟುಗೂಡಿಸುವ ಕಾರ್ಯಕ್ರಮಕ್ಕೆ ನಾವೇ ಸ್ವಯಂ ಪ್ರೇರಿತರಾಗಿ ಹೋಗದೆ ಸಾಮಾಜಿಕ ಅಂತರ ಕಾಪಾಡಿಕೊಂಡಾಗ ಕೊರೊನಾ ನಮಗೆ ಬಾರದಂತೆ ನೋಡಿಕೊಳ್ಳಬಹುದು.
ಸರಕಾರದ ಉದ್ದೇಶವೂ ಇದೇ. ಸೋಂಕು ಹರಡದಂತೆ ನೋಡಿಕೊಳ್ಳು ವುದೇ ಪ್ರಥಮ ಆದ್ಯತೆ. ಇದಕ್ಕಾಗಿ ಜನಸಂದಣಿ ನಿಯಂತ್ರಿಸಲು ಬಯಸುತ್ತದೆ. ಸೋಂಕುಪೀಡಿತರನ್ನು ಜನರ ಗುಂಪಿನಿಂದ ಬೇರ್ಪಡಿಸಿ ಚಿಕಿತ್ಸೆ ನೀಡುವುದು ಆಗಿದೆ. ಈ ಬಾರಿ ಕೊರೊನಾ ಹರಡಿದರೂ ಸಾವಿನ ಸಂಖ್ಯೆ ಇಳಿಮುಖವಾಗಿದೆ. ಕಾರಣ ಇದರ ನಿಗ್ರಹವನ್ನು, ಕೊಡಬೇಕಾದ ಚಿಕಿತ್ಸೆಯ ವ್ಯವಸ್ಥೆ ,ಯೋಜನೆ ತಿಳಿದಿರುವುದರಿಂದ ಇದೀಗ ಇರುವ ಗುರಿ ಅಂದರೆ ಸೋಂಕು ನಿಯಂತ್ರಣವೇ ಆಗಿದೆ.

ನಿಮ್ಮ ಬಾತ್‌ ರೂಮ್‌, ಟೇಬಲ್‌ ಮೇಲ್ಭಾಗಗಳು, ಚೇರ್‌ಗಳ ಹಿಡಿಕೆಗಳು, ಬಾಗಿಲ ಚಿಲಕಗಳು ಹೀಗೆ ಎಲ್ಲ ಕಡೆ ಸ್ಯಾನಿಟೆ„ಸ್‌ ದ್ರವವನ್ನು ಸಿಂಪಡಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಔಷಧ ಸಿಂಪಡಣೆಯ ಅನಂತರ ಕೇವಲ 15 ಸೆಕೆಂಡುಗಳಿಂದ ಕೆಲವು ನಿಮಿಷಗಳಲ್ಲಿ ರೋಗಾಣುಗಳು ಸಾಯುತ್ತವೆ ಮತ್ತು ಇದು ನೀವು ಸಿಂಪಡಿಸಿದ ಔಷಧದ ಗುಣಮಟ್ಟದ ಮೇಲೂ ಕೂಡ ಅವಲಂಬಿತವಾಗಿರುತ್ತದೆ ಎಂಬುದು ನೆನಪಿರಲಿ.

ಸಾಧ್ಯವಾದಷ್ಟು ಕೆಲವು ವಸ್ತುಗಳನ್ನು ಪದೇಪದೆ ಮುಟ್ಟುವುದರಿಂದ ದೂರವಿದ್ದರೆ ಒಳ್ಳೆಯದು. ಅದು ನಿಮ್ಮ ನೆಚ್ಚಿನ ಹಣದ ನೋಟುಗಳಾದರೂ ಸರಿ. ನಿಮ್ಮ ಮೊಬೈಲ್‌ ಫೋನ್‌ ಅಥವಾ ಟಿವಿ ಸ್ಕ್ರೀನ್‌, ನಿಮ್ಮ ರಿಮೋಟ್‌ ವಸ್ತುಗಳು ಹೀಗೆ ಇಂತಹ ವಸ್ತುಗಳಿಂದ ಸ್ವಲ್ಪ ದೂರವಿದ್ದರೆ ಒಳ್ಳೆಯದು.

Advertisement

ಯಾವುದೇ ಕಾರಣಕ್ಕೂ ಮೊಬೆ„ಲ್‌ ಫೋನ್‌ ಅನ್ನು ಬಾತ್‌ರೂಮ್‌ಗೆ ತೆಗೆದುಕೊಂಡು ಹೋಗಬೇಡಿ. ತೇವಾಂಶ ಹೆಚ್ಚಿರುವ ಕಾರಣ ಸೂಕ್ಷ್ಮಾಣುಗಳ ಪೋಷಣೆಗೆ ನೀವೇ ಅನುವು ಮಾಡಿಕೊಟ್ಟಂತಾಗುತ್ತದೆ. ಒಂದು ವೇಳೆ ನಿಮಗೆ ಔಷಧ ಸಿಂಪಡಣೆಗೆ ಸಾಧ್ಯತೆ ಇಲ್ಲದೆ ಹೋದರೆ ಅಥವಾ ನೀವು ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಕೈಗಳನ್ನು ಆಗಾಗ ಸ್ಯಾನಿಟೆ„ಸರ್‌ ಉಪಯೋಗಿಸಿ ಸ್ವತ್ಛ ಮಾಡಿಕೊಳ್ಳುತ್ತಿರಿ. ಮತ್ತು ಪ್ರಮುಖವಾಗಿ ಯಾವುದೇ ಕಾರಣಕ್ಕೂ ಮನೆಯ ಹೊರಗಡೆ ಹೋದಂತಹ ಸಂದರ್ಭದಲ್ಲಿ ನಿಮ್ಮ ಕೈಗಳಿಂದ ನಿಮ್ಮ ಕಣ್ಣುಗಳು, ಮೂಗು, ಮುಖ ಹಾಗೂ ಬಾಯಿಯನ್ನು ಆಗಾಗ ಮುಟ್ಟಿ ಕೊಳ್ಳಬೇಡಿ. ಕೋವಿಡ್‌ ಲಕ್ಷಣ ನಮಗೆಲ್ಲ ತಿಳಿದೇ ಇದೆ. ಅನುಮಾನ ಕಂಡು ಬಂದರೆ ತತ್‌ಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ,ಕುಟುಂಬ ಸದಸ್ಯರಿಗೆ, ಹಿರಿಯರಿಗೆ ಹರಡದಂತೆ ಜಾಗ್ರತೆ ವಹಿಸಿ, ಸೋಂಕು ಇದೆ ಎಂದು ಗೊತ್ತಾದರೆ ತತ್‌ಕ್ಷಣ ಚಿಕಿತ್ಸೆ ನೀಡಿದರೆ ಗುಣಮುಖವಾಗುತ್ತದೆ. ಭಯ ಪಡುವ ಅಗತ್ಯವಿಲ್ಲ. ಇದಕ್ಕಾಗಿ ನಮ್ಮ ಕಿವಿ ಮಾತು ಜನರು ಸ್ವಯಂ ನಿಯಂತ್ರಣ ವಹಿಸಬೇಕು. ಸೋಂಕು ನಿರ್ಮೂಲನೆಗೆ ಸಹಕಾರ ನೀಡಬೇಕು ಎಂಬುದು ಕಳಕಳಿಯ ಮನವಿ.

Advertisement

Udayavani is now on Telegram. Click here to join our channel and stay updated with the latest news.

Next