Advertisement

ಕಾರ್ಯಕ್ರಮ ಮುಖ್ಯಸ್ಥರಾಗಿ ಡಾ|ಬಸು ಅಧಿಕಾರ ಸ್ವೀಕಾರ

08:07 AM Jun 02, 2020 | Suhan S |

ಧಾರವಾಡ: ಧಾರವಾಡದ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾಗಿ ಕತೆಗಾರ ಡಾ| ಬಸು ಬೇವಿನಗಿಡದ ಸೋಮವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈ ಹಿಂದೆ ಮುಖ್ಯಸ್ಥರಾಗಿದ್ದ ಸತೀಶ ಪರ್ವತಿಕರ ಅವರು ಮೇ 31ರಂದು ನಿವೃತ್ತರಾದ ಕಾರಣ ಆ ಸ್ಥಾನಕ್ಕೆ ಹಿರಿಯ ಕಾರ್ಯಕ್ರಮ ಅಧಿಕಾರಿಯಾಗಿದ್ದ ಡಾ| ಬಸು ಬೇವಿನಗಿಡದ ಅವರನ್ನು ನೇಮಿಸಲಾಗಿದೆ.  ಆಕಾಶವಾಣಿ ಮತ್ತು ದೂರದರ್ಶನದ ದಕ್ಷಿಣ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಡಾ|ರಾಜಕುಮಾರ ಉಪಾಧ್ಯಾಯ ಅವರು ನೇಮಕ ಆದೇಶ ಹೊರಡಿಸಿದ್ದಾರೆ.

Advertisement

ಬೇವಿನಗಿಡದ ಕುರಿತು: ಡಾ| ಬಸು ಬೇವಿನಗಿಡದ ಅವರು ಇದುವರೆಗೆ ಧಾರವಾಡ ಸೇರಿದಂತೆ ಕಲಬುರ್ಗಿ, ವಿಜಯಪುರ, ಕಾರವಾರ ಮುಂತಾದ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿ ರಾಷ್ಟ್ರೀಯ ವಾರ್ಷಿಕ ಸ್ಪರ್ಧೆಗಳಲ್ಲಿ ಸತತ ಎರಡು ಸಲ ಪ್ರಥಮ ಬಹುಮಾನ, ರಾಜ್ಯಮಟ್ಟದ ಆಕಾಶವಾಣಿ ಸ್ಪರ್ಧೆಗಳಲ್ಲಿ ಸತತ ಮೂರು ಸಲ ಪ್ರಥಮ ಬಹುಮಾನ ಪಡೆದಿದ್ದಾರೆ. ಗುಣಮಟ್ಟದ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಿ, ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ವಿಶಿಷ್ಟತೆ ಗಳಿಸಿದ್ದಾರೆ. ತಮ್ಮ ಸಾಹಿತ್ಯ ಕೃತಿಗಳಿಗಾಗಿ ಎರಡು ಸಲ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next