Advertisement

ಬಜೆಟ್ ಕುರಿತು ಟೀಕೆ: ಡಿ.ಕೆ.ಸುರೇಶ್ ಗೆ ಡಾ.ಅಶ್ವತ್ಥ ನಾರಾಯಣ,ರೇಣುಕಾಚಾರ್ಯ ತಿರುಗೇಟು

11:36 AM Feb 02, 2022 | Team Udayavani |

ಬೆಂಗಳೂರು : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಉಪ್ಪು ಹುಳಿ ಖಾರ ಇಲ್ಲ ಎಂದು ಹೇಳಿಕೆ ನೀಡಿದ್ದ ರಾಜ್ಯದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರಿಗೆ ಬಿಜೆಪಿ ನಾಯಕರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ.

Advertisement

ರೇಣುಕಾಚಾರ್ಯ ಅವರು ಟ್ವೀಟ್ ಮೂಲಕ , ರುಚಿ ಗೊತ್ತಾಗದಿರುವುದು ಕೋವಿಡ್ ೧೯ ಲಕ್ಷಣಗಳಲ್ಲಿ ಒಂದಾಗಿರುವ ಕಾರಣ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.! ಎಂದು ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ ನಾರಾಯಣ, ಇರಲಿ ಬಿಡಿ ರೇಣುಕಾಚಾರ್ಯ ಅವರೇ, ಡಿಕೆ ಸಹೋದರರು #ಸೋಂಕಿನಜಾತ್ರೆ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ.ಅದಲ್ಲದೇ, ಹೊಡಿ ಬಡಿ ದಾಂಡಿಗರ ನಾಲಿಗೆಗೆ ಸಿಹಿ ಸುದ್ದಿ ಹಿಡಿಸದು! ಕಸ್ತೂರಿಯ ಪರಿಮಳ, ಮಾಣಿಕ್ಯದ ಮೌಲ್ಯ, ಬಜೆಟ್‌ನ ದೂರದೃಷ್ಟಿ ಎಲ್ಲರಿಗೂ ತಿಳಿಯದು. ಮುಳುಗುತ್ತಿರುವ ಹಡಗಿಗೆ ಬೆಳಗುತ್ತಿರುವ ನವಭಾರತ ಕಾಣುತ್ತಿಲ್ಲ ಅಷ್ಟೇ! ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next