Advertisement

ಸಾಗರ ಬ್ಯಾಕೋಡಿಯಲ್ಲಿ ವೃದ್ಧ ದಂಪತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

02:01 PM Sep 13, 2020 | keerthan |

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಬ್ಯಾಕೋಡಿನಲ್ಲಿ ಶನಿವಾರ ರಾತ್ರಿ ವೃದ್ಧ ದಂಪತಿಗಳ ಜೋಡಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.

Advertisement

88 ವರ್ಷದ ಸುಂದರ ಶೇಟ್ ಮತ್ತು ಅವರ ಪತ್ನಿ 79 ವರ್ಷದ ಸುಲೋಚನ ಶೇಟ್ ಕೊಲೆಯಾದವರು ಎನ್ನಲಾಗಿದೆ.

ಸುಂದರ್ ಶೇಟ್ ಅವರು ನಲವತ್ತು ವರ್ಷಗಳ ಹಿಂದೆ ಬಂಗಾರದ ಆಭರಣ ತಯಾರಿಕೆ ಕೆಲಸ ಮಾಡುತ್ತಿದ್ದರು. ಈ ದಂಪತಿಗಳಿಗೆ ಮೂವರು ಮಕ್ಕಳಿದ್ದು, ಅದರಲ್ಲಿ ಇಬ್ಬರು ಗಂಡು ಮಕ್ಕಳು ಕುಂದಾಪುರದಲ್ಲಿ ಬಂಗಾರದ ಅಂಗಡಿ ಇರಿಸಿಕೊಂಡಿದ್ದಾರೆ. ಒಬ್ಬಳು ಮಗಳಿಗೆ ಮದುವೆ ಆಗಿದೆ.

ಇದನ್ನೂ ಓದಿ: “ನಾನೂ ಡ್ರಗ್ ಅಡಿಕ್ಟ್” ಈಗ ವೈರಲ್ ಆಗುತ್ತಿದೆ ಕಂಗನಾ ರಣಾವುತ್ ಹಳೇಯ ವಿಡಿಯೋ

ಸುಂದರ್ ಶೇಟ್ ಅವರಿಗೆ ಸಾಗರದ ಬ್ಯಾಕೋಡಿನಲ್ಲಿ ಒಂದು ಎಕರೆ ಅಡಿಕೆ ತೋಟವಿದ್ದು, ಗಂಡ ಹೆಂಡತಿ ಇಬ್ಬರೇ ಬ್ಯಾಕೋಡಿನಲ್ಲಿ ವಾಸ ಮಾಡುತ್ತಿದ್ದರು. ಶನಿವಾರ ರಾತ್ರಿ ಇವರ ಕೊಲೆ ನಡೆದಿದ್ದು, ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ, ಯಾರು ಮಾಡಿದ್ದಾರೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

Advertisement

ಇದನ್ನೂ ಓದಿ: ಮೂಡುಬಿದಿರೆ: ಕೋಳಿ ಸಾಗಾಟದ ಟೆಂಪೊ -ಬೈಕ್ ಢಿಕ್ಕಿ, ಸವಾರರಿಬ್ಬರು ಗಂಭೀರ ಗಾಯ

ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next