Advertisement

ಹಾಡಹಗಲೇ ಅಟ್ಟಿಸಿಕೊಂಡು ಹೋಗಿ ಸಹೋದರರಿಬ್ಬರ ಕೊಚ್ಚಿ ಕೊಲೆ!

01:30 PM Jan 15, 2021 | Team Udayavani |

ಕಲಬುರಗಿ: ಹಾಡಹಗಲೇ ಸಹೋದರರಿಬ್ಬರನ್ನು ಅಟ್ಟಿಸಿಕೊಂಡು ಹೋಗಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ತಡಕಲ್ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ‌.

Advertisement

ನಿಲೇಶ (34), ರಾಜಶೇಖರ (28) ಎಂಬುವವರೇ ಕೊಲೆಯಾದ ಸಹೋದರರು.

ಗ್ರಾಮದ ಹೊರವಲಯದಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಗುಂಪೊಂದು ಅಟ್ಟಿಸಿಕೊಂಡು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆ ಮಾಡಿದೆ. ಆರೇಳು ಜನರು ಸೇರಿಕೊಂಡು ಈ ಜೋಡಿ ಕೊಲೆ ಮಾಡಿದ್ದಾರೆ. ಕೃತ್ಯದ ಹಿಂದಿನ ನಿಖರವಾದ ಕಾರಣ ಲಭ್ಯವಾಗಿಲ್ಲ.

ಇದನ್ನೂ ಓದಿ:ಒಳ ಉಡುಪಿನಲ್ಲಿಟ್ಟು 2.15 ಕೆ.ಜಿ ಚಿನ್ನ ಸಾಗಾಟ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಬ್ಬರ ಸೆರೆ

ಅದೇ ಗ್ರಾಮದವರೇ ಈ ಕೃತ್ಯ ಎಸಗಿದ್ದು ಎನ್ನಲಾಗಿದ್ದು, ಇಡೀ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಗ್ರಾಮೀಣ ವೃತ್ತ ಸಿಪಿಐ ಶಂಕರ ಗೌಡ ಪಾಟೀಲ್, ಮಹಾಗಾಂವ್ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.

Advertisement

ಈ ಕುರಿತು ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next