Advertisement

ಪತ್ನಿ ಬದಲು ಅಧಿಕಾರ ಚಲಾಯಿಸ್ಬೇಡಿ!

03:20 PM Jan 23, 2021 | Team Udayavani |

ಕಲಬುರಗಿ: ಜನಮತದಲ್ಲಿ ಚುನಾಯಿತರಾದ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರಿಗೆ ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿ
ಕಾರಿ ವಿ.ವಿ. ಜ್ಯೋತ್ಸಾ ಕರೆ ನೀಡಿದರು. ನಗರದ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ನಡೆದ ಕಲಬುರಗಿ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಈ ಮೀಸಲಾತಿ ನಿಗದಿ ಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮತ್ತು ಸದಸ್ಯರು ಆಗಮಿಸಿದ್ದರು. ಆದರೆ,  ಅರ್ಧದಷ್ಟು ಮಹಿಳಾ ಸದಸ್ಯರು ಆಯ್ಕೆಯಾಗಿದ್ದರೂ ಪುರುಷರ ಸಂಖ್ಯೆಯೇ ಅ ಧಿಕವಾಗಿತ್ತು. ಹೀಗಾಗಿ ಸಭೆಯೊಳಗೆ ಗೆಲುವಿನ ಪ್ರಮಾಣಪತ್ರ ಮತ್ತು ಅವರ ಗುರುತಿನ ಚೀಟಿ ಪರಿಶೀಲನೆಗೆ ಒಳಗೆ ಬಿಡಲಾಗಿತ್ತು. ಮಹಿಳಾ ಸದಸ್ಯರ ಬದಲು ಬಂದ ಪತಿಯಂದಿರು ಮತ್ತು ಕುಟುಂಬದವರನ್ನು ಸಭಾಂಗಣದ ಹೊರಗೆ ನಿಲ್ಲಿಸಲಾಗಿತ್ತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ಈ ಸಭೆಗೆ ಚುನಾಯಿತ ಸದಸ್ಯರು ಮಾತ್ರ ಬರಬೇಕಿತ್ತು. ಆದರೆ, ಮಹಿಳೆಯರ ಪರವಾಗಿ ಬೇರೆ ಯಾರೋ ಬಂದಿದ್ದಾರೆ. ಹಾಗೇ ಬಂದವರಿಗೆ ಸಭೆಗೆ ಅವಕಾಶ ನೀಡಿಲ್ಲ. ಅದೇ ರೀತಿ ಗ್ರಾಮ ಪಂಚಾಯಿತಿ ಸಭೆ, ನಿರ್ಣಯ, ನಿರ್ಧಾರ ತೆಗೆದುಕೊಳ್ಳಲು ಚುನಾಯಿತ ಸದಸ್ಯರೇ ಅರ್ಹರೇ ಹೊರತು ಬೇರೆ ಯಾರೂ ಅರ್ಹರಲ್ಲ ಎಂದು ಹೇಳಿದರು.

ಮಹಿಳೆಯರಿಗೆ ಕುಟುಂಬದವರು ಅಗತ್ಯ ಸಹಾಯ ಮಾಡಬಹುದು, ಸಲಹೆ ನೀಡಬಹುದು. ಅದಕ್ಕೆ ಬೇಡ ಎನ್ನೋದಿಲ್ಲ. ಆದರೆ, ಅವರ ಮೇಲೆ ಪ್ರಭಾವ ಬೀರಬೇಡಿ. ಸಹಾಯ ಮತ್ತು ಪ್ರಭಾವಕ್ಕೆ ವ್ಯತ್ಯಾಸವಿದೆ. ಹೀಗಾಗಿ ಮಹಿಳಾ ಸದಸ್ಯರ ಕುಟುಂಬದವರು ಅವರಿಗೆ ಮುಕ್ತ, ಸ್ವತಂತ್ರವಾಗಿ ನಿರ್ಣಯ ಮತ್ತು ನಿರ್ಧಾರ ಕೈಗೊಳ್ಳಲು ಅವಕಾಶ ಮಾಡಿಕೊಡಬೇಕು. ಗ್ರಾಮಗಳಲ್ಲೂ ಮಹಿಳಾ ಸದಸ್ಯರಿಗೆ ಮುಕ್ತವಾದ ವಾತಾವರಣ ನಿಮಿರ್ಸಬೇಕೆಂದು ಸಲಹೆ ನೀಡಿದರು.

ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಜನರು ನಿಮ್ಮ (ಸದಸ್ಯರು)  ಮೇಲೆ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಅಧಿ ಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಸಮನ್ವಯತೆ ಹೊಂದಬೇಕು. ಜತೆಗೆ ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಸದಸ್ಯರು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.

Advertisement

ಹೊಸವಾಗಿ ಆಯ್ಕೆಯಾದ ಸದಸ್ಯರಿಗೆ ತರಹೇವಾರಿ ಕೆಲಸ ಮಾಡಬೇಕೆಂಬ ಇಚ್ಛೆ ಇರುತ್ತದೆ. ಆದರೆ, ಅ ಧಿಕಾರಿಗಳು ಇದರಲ್ಲಿ ಕೆಲ ಕೆಲಸ ಮಾಡಲು ಅವಕಾಶ
ಇಲ್ಲವೆಂದು ಹೇಳುತ್ತಾರೆ. ಆಗ ಅಧಿಕಾರಿಗಳು ಮತ್ತು ಸದಸ್ಯರ ಮಧ್ಯೆ ಕಲಹ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾವ ಕಾಮಗಾರಿಗಳು ನಿಮ್ಮ ವ್ಯಾಪ್ತಿಗೆ ಬರುತ್ತವೆ? ಯಾವ ಕಾಮಗಾರಿಗಳು ಬರುವುದಿಲ್ಲ? ಎನ್ನುವ ಬಗ್ಗೆಯೂ ಮಾಹಿತಿ ಹೊಂದಿರಬೇಕು ಎಂದು ಸಲಹೆ ನೀಡಿದರು.

ತಮ್ಮ-ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡಬೇಕು. ಅಭಿವೃದ್ಧಿ ಕಾಮಗಾರಿಗಳು ಅಥವಾ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದರೆ, ಅದು ಬಹಿರಂಗಗೊಂಡಾಗ ಮುಂದುವರೆಸಲು ಸಾಧ್ಯವಾಗುವುದಿಲ್ಲ. ಅಲ್ಲದೇ, ಅದನ್ನು ಪುನರ್‌ ಆರಂಭಿಸಲು ನಾಲ್ಕೈದು ವರ್ಷಗಳಾದರೂ ಹಿಡಿಯುತ್ತದೆ. ಇದರಿಂದ ಸಾರ್ವಜನಿಕರು, ಫಲಾನುಭವಿಗಳು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಂಚಾಯಿತಿಗಳಿಗೆ ಸರ್ಕಾರದಿಂದ ಸೀಮಿತವಾದ ಅನುದಾನ ಬರುತ್ತದೆ. ಹೀಗಾಗಿ ಅನುದಾನಕ್ಕೆ ಅನುಸಾರವಾಗಿ ಆದ್ಯತೆ ಮೇರೆಗೆ ಕಾಮಗಾರಿ
ಕೈಗೆತ್ತಿಕೊಳ್ಳಬೇಕು. ಈ ಸಮಯದಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡಾಗ ಅಗತ್ಯ ಕಾಮಗಾರಿಗಳನ್ನು ಬೇಗ ಮುಗಿಸಲು ಸಾಧ್ಯವಾಗುತ್ತದೆ ಎಂದರು.

ಸಹಾಯಕ ಆಯುಕ್ತ ಬಲರಾಮ ಲಮಾಣಿ, ತಹಶೀಲ್ದಾರ್‌ ಜಗನ್ನಾಥ ಪೂಜಾರಿ, ತಾ.ಪಂ ಮುಖ್ಯ ಕಾರ್ಯನಿರ್ವಹಕ ಮಾನಪ್ಪ ಕಟ್ಟಿಮನಿ ಹಾಗೂ ಗ್ರಾಪಂ
ಪಿಡಿಒಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next