Advertisement

ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ : ಕೋವಿಡ್ ನಡುವೆ ರಕ್ತಸಂಗ್ರಹ ಕುಸಿತ

12:47 AM Apr 24, 2021 | Team Udayavani |

ಬೆಂಗಳೂರು: ನೀವು 18 ವರ್ಷ ಮೇಲ್ಪಟ್ಟವರೇ? ಮುಂದಿನ ತಿಂಗಳು ಕೊರೊನಾ ಲಸಿಕೆ ಪಡೆಯಲು ಸಿದ್ಧರಾಗುತ್ತಿದ್ದೀರಾ? ಹಾಗಿ ದ್ದರೆ ಲಸಿಕೆ ಪಡೆಯುವುದಕ್ಕೆ ಮುನ್ನ ರಕ್ತದಾನ ಮಾಡಿ ಜೀವಗಳನ್ನು ಉಳಿಸಲು ನೆರವಾಗಿ…
– ಇದು ರಕ್ತನಿಧಿ ಕೇಂದ್ರಗಳು, ಸ್ವಯಂ ಸೇವಾ ಸಂಸ್ಥೆಗಳು, ವೈದ್ಯರ ಮನವಿ.

Advertisement

ಕೊರೊನಾ ಎರಡನೇ ಅಲೆಯಿಂದಾಗಿ 2 ವಾರಗಳಿಂದ ರಕ್ತಸಂಗ್ರಹ ಪ್ರಮಾಣ ಶೇ. 50ರಷ್ಟು ಕುಸಿದಿದೆ. ಮುಂಬರುವ ತಿಂಗಳಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ ಆರಂಭವಾಗು ತ್ತಿದೆ. ಆದರೆ, ರಾಷ್ಟ್ರೀಯ ರಕ್ತಚಾಲನ ಪರಿಷತ್ತಿ (ಎನ್‌ಬಿಟಿಸಿ)ನ ನಿರ್ದೇಶನ ಮತ್ತು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಲಸಿಕೆ ಪಡೆ ದವರು ಮುಂದಿನ 28 ದಿನ ರಕ್ತದಾನ ಮಾಡು ವಂತಿಲ್ಲ. ಎರಡು ಡೋಸ್‌ಗಳ ನಡುವೆ 28 ದಿನ ಅಂತರವಿದ್ದು, ಒಟ್ಟಾರೆ 56 ದಿನ ರಕ್ತದಾನ ಸಾಧ್ಯವಾಗುವುದಿಲ್ಲ. ಇದರಿಂದಾಗಿ ರಾಜ್ಯದಲ್ಲಿ ರಕ್ತದ ತೀವ್ರ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಿದೆ.

ರಕ್ತದಾನಿಗಳ ಪೈಕಿ ಶೇ. 80ಕ್ಕೂ ಅಧಿಕ ಮಂದಿ 18 ಮಿಕ್ಕಿದವರೇ ಇದ್ದು, ರಕ್ತ ಸಂಗ್ರಹಕ್ಕೆ ಆಧಾರವಾಗಿದ್ದಾರೆ.

ಪ್ರೌಢ ವಯಸ್ಕರ ಲಸಿಕೆ ಅಭಿಯಾನ ಆರಂಭವಾದರೆ ಮುಂದಿನ 2-3 ತಿಂಗಳು ದೊಡ್ಡ ಸವಾಲಾಗಲಿದೆ. ಹೀಗಾಗಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಎಂದು ಮನವಿ ಮಾಡುತ್ತಿದ್ದೇವೆ ಎನ್ನುತ್ತಾರೆ ರಕ್ತನಿಧಿ ಸಂಸ್ಥೆಗಳ ಮುಖ್ಯಸ್ಥರು.

ರಕ್ತನಿಧಿಗಳಲ್ಲಿ “ನೋ ಸ್ಟಾಕ್‌’
ರಾಜ್ಯದ ವಿವಿಧ ಜಿಲ್ಲೆಗಳ ಅನೇಕ ರಕ್ತ ನಿಧಿ ಕೇಂದ್ರಗಳು ಕನಿಷ್ಠ ಒಂದು ಯುನಿಟ್‌ ರಕ್ತ ಸಂಗ್ರಹವೂ ಇಲ್ಲದೇ “ನೋ ಸ್ಟಾಕ್‌’ ಎನ್ನುತ್ತಿವೆ. ರಕ್ತ ಮತ್ತು ರಕ್ತದ ಇತರ ಭಾಗಗಳಾದ ಬಿಳಿ ರಕ್ತಕಣಗಳು, ಪ್ಲೇಟ್ಲೆಟ್‌ ಗಳು ಸಿಗದೆ ರೋಗಿಗಳು ಸಮಸ್ಯೆ
ಎದುರಿಸುತ್ತಿದ್ದಾರೆ.

Advertisement

ಆತಂಕ ಬಿಟ್ಟು ರಕ್ತದಾನ ಮಾಡಿ
ರಕ್ತನಿಧಿ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಸೋಂಕು ತಗುಲದಂತೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವ ಜನಿಕರು ಧೈರ್ಯವಾಗಿ ರಕ್ತದಾನ ಮಾಡಬಹುದು. ಸಂಘ ಸಂಸ್ಥೆಗಳು ಅನುಮತಿ ಪಡೆದು ರಕ್ತ ನಿಧಿ ಕೇಂದ್ರ ಸಹಕಾರದೊಂದಿಗೆ ಸಣ್ಣ ಮಟ್ಟದಲ್ಲಿ ರಕ್ತದಾನ ಶಿಬಿರ ಆಯೋಜಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next