Advertisement

ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ತೊರೆದಿಲ್ಲ : ಸಚಿವ ರಮೇಶ

06:21 AM May 27, 2020 | Suhan S |

ತೆಲಸಂಗ: ಸ್ವಾರ್ಥಕ್ಕಾಗಿ ಕಾಂಗ್ರೆಸ್‌ ಪಕ್ಷ ತೊರೆದಿಲ್ಲ. ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ನಿಂದ ಹೊರಬಂದೇವು ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.

Advertisement

ಮಂಗಳವಾರ ಸಮೀಪದ ಕೊಟ್ಟಲಗಿ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ಅಥಣಿ ಮತ್ತು ಕಾಗವಾಡ ಅಭ್ಯರ್ಥಿಗಳ ಪರವಾಗಿ ಅಕಾಡಕ್ಕಿಳಿದಾಗ ಇಲ್ಲಿ ಕಂಡದ್ದು ಬರದಿಂದ ರೈತರು ನಲಗುತ್ತಿದ್ದುದು. ಇದು ರಾಜಕಿಯ ಭಾಷಣ ಅಲ್ಲ. ಆದಷ್ಟು ಬೇಗ ಕೊಟ್ಟಲಗಿ ಬಾಗಕ್ಕೆ ನೀರು ತರುವ ಕೆಲಸ ಮಾಡುವೆ. ನೀರಾವರಿ ಸಚಿವನಾಗಿದ್ದಕ್ಕೆ ಸಾರ್ಥಕತೆ ಹೊಂದುತ್ತೇನೆ. 3 ವರ್ಷದಲ್ಲಿ ಮಹೇಶ ಕುಮಠಳ್ಳಿ ಕ್ಷೇತ್ರಕ್ಕೆ ನೀರಾವರಿಗಾಗಿ 2 ಸಾವಿರ ಕೋಟಿ ಕೊಡುತ್ತೇನೆ. ಬರುವ ಚುನಾವಣೆಯಲ್ಲಿ ಪ್ರಚಾರ ಮಾಡದೇ ಮಹೇಶ ಕುಮಠಳ್ಳಿ ಆಯ್ಕೆ ಆಗಬೇಕು. ಹಣ ಬಿಡುಗಡೆಗೊಳಿಸುವ ಜವಾಬ್ದಾರಿ ನನ್ನದು. ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನಿಮ್ಮದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಅಥಣಿ ತಾಲೂಕು ನೀರಾವರಿಗೊಳ್ಳಲು ರಮೇಶ ಜಾರಕಿಹೊಳಿಯೇ ಬರಬೇಕಾಯಿತು. ಬರದಿಂದ ನಲುಗಿದ ಜನರಿಗೆ ನೀರು ಕೊಡುವ ನೀವು ನಮ್ಮ ಪಾಲಿನ ಭಗೀರಥರು ಎಂದು ಬಣ್ಣಿಸಿದರು.

ತೆಲಸಂಗ ಜಿಪಂ ಸದಸ್ಯ ಗುರಪ್ಪ ದಾಶ್ಯಾಳ, ಕೊಕಟನೂರ ಜಿಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ್‌ ಸೇರಿದಂತೆ ಸ್ಥಳೀಯ ಮತ್ತು ತಾಲೂಕು ಭಾಜಪ ಮುಖಂಡರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next