Advertisement

ಕೋಲ್ಕತ ಘಟನೆ ಪ್ರತಿಭಟಿಸಿ ಕೊಯಮುತ್ತೂರಿನಲ್ಲಿ ವೈದ್ಯರ ಧರಣಿ

09:44 AM Jun 18, 2019 | Sathish malya |

ಕೊಯಮುತ್ತೂರು : ಕೋಲ್ಕತದಲ್ಲಿ ಜೂನಿಯರ್‌ ಡಾಕ್ಟರ್‌ ಮೇಲೆ ನಡೆದಿರುವ ಹಲ್ಲೆಯನ್ನು ಪ್ರತಿಭಟಿಸಿ ನೂರಕ್ಕೂ ಅಧಿಕ ವೈದ್ಯರು ಇಂದು ಶುಕ್ರವಾರ ಇಲ್ಲಿನ ಸರಕಾರಿ ಆಸ್ಪತ್ರೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಸ್ಥಳೀಯ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಘಟಕದ ವೈದ್ಯರು ಮತ್ತು ತಮಿಳು ನಾಡು ಸರಕಾರಿ ವೈದ್ಯರ ಸಂಘದ ಸದಸ್ಯ ವೈದ್ಯರು ಘೋಷಣೆಗಳನ್ನು ಕೂಗಿ ವೈದ್ಯ ಸಮುದಾಯದವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.

ಕೋಲ್ಕತ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯೊಬ್ಬರ ಸಂಬಂಧಿಕರು ಜೂನಿಯರ್‌ ಡಾಕ್ಟರ್‌ ಮೇಲೆ ಹಲ್ಲೆ ನಡೆಸಿದ್ದನ್ನು ಪ್ರತಿಭಟಿಸಿದ ವೈದ್ಯರು ಹಲ್ಲೆಕೋರರ ವಿರುದ್ಧ ತುರ್ತು ಕ್ರಮಕ್ಕೆ ಆಗ್ರಹಿಸಿದರು.

ಇದೇ ವೇಳೆ ಕೋಲ್ಕತದಲ್ಲಿ ವೈದ್ಯರ ಮುಷ್ಕರ ಇಂದು ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next