Advertisement

ಶ್ರೀಮನ್ನಾರಾಯಣ ತಡವಾಗಲು ಕಾರಣ ಏನ್‌ ಗೊತ್ತಾ?

09:59 AM Aug 28, 2019 | Lakshmi GovindaRaj |

ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆ ನಂಬಿಕೆ ಚಿತ್ರತಂಡದಲ್ಲಿದ್ದ ಕಾರಣಕ್ಕೇ ಆಗಸ್ಟ್‌ನಲ್ಲಿ ಬರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಕೆಲವೊಮ್ಮೆ ಅಂದುಕೊಂಡಂತೆ ಆಗುವುದಿಲ್ಲ. ಕನಸುಗಳು ದೊಡ್ಡದಾಗುತ್ತಾ ಹೋದಂತೆ ಕನಸು ಸಾಕಾರಗೊಳಿಸಲು ಸಮಯವೂ ಬೇಕಾಗುತ್ತದೆ. ಈಗ “ಅವನೇ ಶ್ರೀಮನ್ನಾರಾಯಣ’ ತಂಡಕ್ಕೆ ಆಗಿರೋದು ಕೂಡಾ ಅದೇ.

Advertisement

ಅತಿ ಹೆಚ್ಚು ದಿನ ಚಿತ್ರೀಕರಣವಾದ ಸಿನಿಮಾ ಎಂಬ ಟ್ಯಾಗ್‌ಲೈನ್‌ ಒಂದು ಕಡೆಯಾದರೆ, ಪಂಚಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ರಕ್ಷಿತ್‌ ಅವರ ಮೊದಲ ಸಿನಿಮಾ ಎಂಬುದು ಮತ್ತೂಂದು ಅಂಶ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ “ಅವನೇ ಶ್ರೀಮನ್ನಾರಾಯಣ’ ಬಿಡುಗಡೆಯಾಗುತ್ತಿದೆ. ಪ್ಯಾನ್‌ ಇಂಡಿಯಾ ಬಿಡುಗಡೆಯಾಗುವಾಗ ಚಿತ್ರದ ಗುಣಮಟ್ಟ ಕೂಡಾ ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಇರಬೇಕೆಂದುಕೊಂಡ ಚಿತ್ರತಂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಸಿನಿಮಾ ಕೆಲಸದಲ್ಲಿ ಬಿಝಿಯಾಗಿದೆ.

ಈಗಾಗಲೇ ಡಬ್ಬಿಂಗ್‌, ಎಡಿಟಿಂಗ್‌ ಎಲ್ಲಾ ಮುಗಿಸಿರುವ ಸಿನಿಮಾದ ಬಹುಪಾಲು ಸಮಯವನ್ನು ವಿಎಫ್ಎಕ್ಸ್‌ ಹಾಗೂ ಸಿಜಿ ತೆಗೆದುಕೊಳ್ಳುತ್ತಿದೆ. ತಂತ್ರಜ್ಞರ ದೊಡ್ಡ ಬಳಗವೇ ಎರಡೆರಡು ಶಿಫ್ಟ್ನಲ್ಲಿ ಈ ಕೆಲಸ ಮಾಡುತ್ತಿದೆ. “ಅವನೇ ಶ್ರೀಮನ್ನಾರಾಯಣ’ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲಿ ನಡೆದಿದೆ. ಜೊತೆಗೆ ಚಿತ್ರದಲ್ಲಿ ಗ್ರಾಫಿಕ್‌ಗೆ ಹೆಚ್ಚಿನ ಜಾಗವಿದೆ. ಆರಂಭದಲ್ಲಿ ಚಿತ್ರತಂಡ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯ ವಿಎಫ್ಎಕ್ಸ್‌ಗೆ ಬೇಕಾಗಿರುವುದರಿಂದ ಚಿತ್ರ ಬಿಡುಗಡೆ ಕೂಡಾ ಮುಂದಕ್ಕೆ ಹೋಗಿದೆ.

ಹಾಗಾದರೆ, ಚಿತ್ರ ಬಿಡುಗಡೆ ಯಾವಾಗ ಎಂದು ನೀವು ಕೇಳಬಹುದು. ಈಗಾಗಲೇ ಗಾಂಧಿನಗರದಲ್ಲಿ “ಅವನೇ ಶ್ರೀಮನ್ನಾರಾಯಣ’ ಚಿತ್ರ ಮುಂದಕ್ಕೆ ಹೋಗಿದ್ದು, ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ ಎಂಬ ಸುದ್ದಿ ಓಡಾಡುತ್ತಿದೆ. ರಕ್ಷಿತ್‌ ಶೆಟ್ಟಿಯ “ಕಿರಿಕ್‌ ಪಾರ್ಟಿ’ ಚಿತ್ರ 2016 ಡಿಸೆಂಬರ್‌ ಕೊನೆಯಲ್ಲಿ ಬಿಡುಗಡೆಯಾಗಿ ದೊಡ್ಡ ಹಿಟ್‌ ಆಯಿತು. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಡಿಸೆಂಬರ್‌ ಕೊನೆಯಲ್ಲಿ ಬಿಡುಗಡೆಯಾದ ಚಿತ್ರಗಳು ಹಿಟ್‌ ಆಗುತ್ತವೆ ಎಂಬ ನಂಬಿಕೆ ಕೂಡಾ ಇದೆ.

ಈ ಕಾರಣದಿಂದಲೂ “ಅವನೇ ಶ್ರೀಮನ್ನಾರಾಯಣ’ ಡಿಸೆಂಬರ್‌ಗೆ ಹೋಗಿದೆ ಎಂಬುದು ಚಿತ್ರರಂಗದ ಕೆಲವರ ಲೆಕ್ಕಾಚಾರ. “ಅವನೇ ಶ್ರೀಮನ್ನಾರಾಯಣ’ ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡುವ ನಿರ್ಮಾಪಕ ಪುಷ್ಕರ್‌, “ಸಿನಿಮಾದ ವಿಎಫ್ಎಕ್ಸ್‌, ಗ್ರಾಫಿಕ್ಸ್‌ ಕೆಲಸಗಳಿಗೆ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿರುವುದು ನಿಜ. ಸದ್ಯ ನಿರಂತರವಾಗಿ ಚಿತ್ರದ ಕೆಲಸಗಳು ನಡೆಯುತ್ತಿವೆ. ಚಿತ್ರವನ್ನು ನವೆಂಬರ್‌ನಲ್ಲಿ ತೆರೆಗೆ ತರಲು ಪ್ರಯತ್ನಿಸುತ್ತಿದ್ದೇವೆ. ಹಾಗಂತ ನಾನು ಈಗಲೇ ಡೇಟ್‌ ಹೇಳಲ್ಲ.

Advertisement

ಏಕೆಂದರೆ ಎಲ್ಲವೂ ಅಂತಿಮವಾಗದೇ ಡೇಟ್‌ ಹೇಳಿದರೆ, ಈಗಾಗಲೇ ಬಿಡುಗಡೆಗೆ ಪ್ಲ್ರಾನ್‌ ಮಾಡಿಕೊಂಡಿರುವ ಇತರ ಸಿನಿಮಾಗಳಿಗೆ ತೊಂದರೆಯಾಗುತ್ತದೆ. ನನಗೆ ಡಿಸೆಂಬರ್‌ಗೆ ಬರಬೇಕು, ಲಕ್ಕಿ .. ಆ ತರಹದ ಯಾವುದೇ ಸೆಂಟಿಮೆಂಟ್‌ ಇಲ್ಲ. ಸಿನಿಮಾ ಕೆಲಸ ಮುಗಿದ ಕೂಡಲೇ ಡೇಟ್‌ ಅನೌನ್ಸ್‌ ಮಾಡುತ್ತೇನೆ’ ಎನ್ನುತ್ತಾರೆ. ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಈಗ ಚಿತ್ರ ಬಿಡುಗಡೆ ಪೂರ್ವ ಕೆಲಸದಲ್ಲಿ ಬಿಝಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next