Advertisement

ಜೆಡಿಎಸ್‌ಗೆ ಬೇಡ,ಕಾಂಗ್ರೆಸ್‌ಗೇ ಅವಕಾಶ: ಆಗ್ರಹ

12:40 AM Mar 15, 2019 | Team Udayavani |

ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೇ  ಸ್ಪರ್ಧಿಸಲು ಅವಕಾಶ ಕೊಡಬೇಕೆಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಹೈಕಮಾಂಡ್‌ನ್ನು ಆಗ್ರಹಿಸಿದೆ.
 
ಇಲ್ಲಿ ಜೆಡಿಎಸ್‌ ಪಂಚಾಯತ್‌ ವ್ಯಾಪ್ತಿಯಲ್ಲೂ ಜನಪ್ರತಿನಿಧಿಗಳನ್ನು ಹೊಂದಿಲ್ಲ. ಹಾಗೆಯೇ ಬ್ಲಾಕ್‌ ಮಟ್ಟದಲ್ಲಿಯೂ ಕ್ರಿಯಾಶೀಲವಾಗಿಲ್ಲ. ಆದರೆ ಕಾಂಗ್ರೆಸ್‌ ಜಿಲ್ಲಾ ವ್ಯಾಪ್ತಿಯಲ್ಲಿ ಬಲಿಷ್ಠವಾಗಿದೆ. ಇದಕ್ಕೆ ಉದಾಹರಣೆ ಮಾ. 10ರಂದು ಉಡುಪಿಯಲ್ಲಿ ನಡೆದ ಪರಿವರ್ತನ ಯಾತ್ರೆಯಲ್ಲಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿರುವುದೇ ಸಾಕ್ಷಿ. ಈ ಹಿಂದಿನ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸುತ್ತಿರುವ ಶೋಭಾ ಕರಂದ್ಲಾಜೆಯವರಿಗೆ ಪಕ್ಷದಲ್ಲಿಯೇ ವಿರೋಧ ವ್ಯಕ್ತವಾಗಿರುವುದರಿಂದ ಕಾಂಗ್ರೆಸ್‌ಗೆ ಈ ಬಾರಿ ಅನುಕೂಲಕರ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ತಮ್ಮ ನಿರ್ಧಾರ ಬದಲಿಸಿ ಇಲ್ಲಿಗೆ ಕಾಂಗ್ರೆಸ್‌ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಸಮಿತಿ ನಿರ್ಣಯ ತಳೆಯಿತು. 

Advertisement

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ನಾಯಕರಾದ ಎಂ.ಎ. ಗಫ‌ೂರ್‌, ನರಸಿಂಹ ಮೂರ್ತಿ, ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ಸರಸು ಡಿ. ಬಂಗೇರ, ಪ್ರಖ್ಯಾತ್‌ ಶೆಟ್ಟಿ, ವಿಶ್ವಾಸ್‌ ಅಮೀನ್‌, ಯತೀಶ್‌ ಕರ್ಕೇರಾ, ಹರೀಶ್‌ ಶೆಟ್ಟಿ ಪಾಂಗಾಳ, ಭಾಸ್ಕರ್‌ ರಾವ್‌ ಕಿದಿಯೂರು, ಶೇಖರ್‌ ಮಡಿವಾಳ ಕಾರ್ಕಳ, ಮಂಜುನಾಥ ಪೂಜಾರಿ ಹೆಬ್ರಿ, ಸತೀಶ್‌ ಅಮೀನ್‌ ಪಡುಕರೆ ಉಡುಪಿ, ಶಂಕರ್‌ ಕುಂದರ್‌ ಕೋಟ, ಮಲ್ಯಾಡಿ ಶಿವರಾಮ್‌ ಶೆಟ್ಟಿ ಕುಂದಾಪುರ, ನವೀನ್‌ಚಂದ್ರ ಸುವರ್ಣ ಕಾಪು, ಗೀತಾ ವಾಗೆ, ಜನಾರ್ದನ ಭಂಡಾರ್ಕರ್‌, ರಮೇಶ್‌ ಕಾಂಚನ್‌, ವಿN°àಶ್‌ ಕಿಣಿ, ಸತೀಶ್‌ ಪೂಜಾರಿ, ಚಂದ್ರಿಕಾ ಶೆಟ್ಟಿ, ಅಬಿಬ್‌ ಅಲಿ, ಸುನಿಲ್‌ ಬಂಗೇರ ಉಪಸ್ಥಿತರಿದ್ದರು. 

ಆಸ್ಕರ್‌, ಸೊರಕೆ ದಿಲ್ಲಿಗೆ
ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ನಿರ್ಧಾರವನ್ನು ಪರಿಷ್ಕರಿಸಲು ಕಾಂಗ್ರೆಸ್‌ ನಾಯಕರಾದ ಆಸ್ಕರ್‌ ಫೆರ್ನಾಂಡಿಸ್‌ ಮತ್ತು ಮಾಜಿ ಸಚಿವ ವಿನಯಕುಮಾರ ಸೊರಕೆಯವರು ದಿಲ್ಲಿಗೆ ತೆರಳಿದ್ದಾರೆ. ಪಕ್ಷದ ನಿರ್ಣಯವನ್ನು ಮರು ಪರಿಶೀಲಿಸಲು ನಾಯಕರು ಪ್ರಯತ್ನಿಸುವರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next