Advertisement

ಸಾಲ ಮನ್ನಾ ರಾಜಕೀಯ ಬೇಡ

06:20 AM Dec 24, 2018 | Team Udayavani |

ಹೊಸದಿಲ್ಲಿ: ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ರೈತರ ಸಾಲ ಮನ್ನಾ ಮಾಡುವ ವಾಗ್ಧಾನ ಮಾಡಿ ಕಾಂಗ್ರೆಸ್‌ ಗೆದ್ದಾಗಿದೆ. ಇದೀಗ ದೇಶದಲ್ಲಿ ಹಸಿರುಕ್ರಾಂತಿಯ ಹರಿಕಾರ ಎಂಬ ಖ್ಯಾತಿಗೆ ಪಾತ್ರರಾಗಿರುವ ಕೃಷಿ ತಜ್ಞ ಡಾ.ಎಂ.ಎಸ್‌.ಸ್ವಾಮಿನಾಥನ್‌ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದು, ಸಾಲ ಮನ್ನಾ ಯೋಜನೆಯನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡಬೇಡಿ.

Advertisement

ಕೃಷಿ ಕ್ಷೇತ್ರದ ಸಮಸ್ಯೆ ಎಂದರೆ ಅರ್ಥ ವ್ಯವ್ಯವಸ್ಥೆಯ ಸಮಸ್ಯೆ ಎಂದು ಹೇಳಿದ್ದಾರೆ. ಮುಂಗಾರು ಮತ್ತು ಮಾರುಕಟ್ಟೆ ವ್ಯವಸ್ಥೆ ಸಣ್ಣ ರೈತರ ಆಶೋತ್ತರಗಳನ್ನು ಈಡೇರಿಸುವ ದಾರಿಯಾಗಿದೆ. ಆರ್ಥಿಕವಾಗಿ ಸಾಧ್ಯವಾಗದ ದಾರಿಗಳನ್ನು ರಾಜಕೀಯ ಪಕ್ಷಗಳು ಅನುಸರಿಸಬಾರದು ಎಂದಿದ್ದಾರೆ. 

ಸಾಲ ಮನ್ನಾ ಎನ್ನುವುದು ಕೃಷಿ ನೀತಿಯ ಭಾಗ ಆಗಿರಲೇಬಾರದು. ಅಪರೂಪಕ್ಕೊಮ್ಮೆ ಆ ನಿಲುವನ್ನು ಅನುಸರಿಸಬಹುದು. ರೈತರು ಸಾಲ ಪಾವತಿಗೆ ಕಷ್ಟ ಅನುಭವಿಸುತ್ತಿದ್ದಾರೆ ಎಂದಾಗ ಮಾತ್ರ ಅದರ ಮೊರೆ ಹೋಗಬಹುದು ಎಂದಿದ್ದಾರೆ ಡಾ.ಸ್ವಾಮಿನಾಥನ್‌.

Advertisement

Udayavani is now on Telegram. Click here to join our channel and stay updated with the latest news.

Next