Advertisement

ಮುಸ್ಲಿಮರನ್ನು ಸಂದೇಹದಿಂದ ನೋಡದಿರಿ: ಮುರುಘಾ ಶ್ರೀ

10:55 AM May 07, 2017 | Team Udayavani |

ದಾವಣಗೆರೆ: ಎಲ್ಲ ಧರ್ಮೀಯರನ್ನು ಒಳಗೊಳ್ಳಿಸಿಕೊಳ್ಳದೆ ಸಮಗ್ರ, ಸುಭದ್ರ ಭಾರತ ಕಟ್ಟುವುದು ಅಸಾಧ್ಯ ಎಂದು ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರು ಪ್ರತಿಪಾದಿಸಿದರು.

Advertisement

ಶನಿವಾರ ಹೈಸ್ಕೂಲ್‌ ಮೈದಾನದಲ್ಲಿ ಆರೆಸ್ಸೆಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಶಿಕ್ಷಾ ವರ್ಗ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತ ನಮ್ಮ ದೇಶ. ನಮ್ಮ ದೇಶಕ್ಕಾಗಿ ಬಾಳುತ್ತೇವೆ.

ಯಾರೋ ಕೆಲವರು ಮಾಡುವ ದ್ರೋಹದ ಕೆಲಸಕ್ಕೆ ಎಲ್ಲರನ್ನೂ ಅನುಮಾನದಿಂದ ನೋಡ ಬೇಡಿ ಎಂಬುದಾಗಿ ಮುಸ್ಲಿಮರು ಹೇಳುತ್ತಾರೆ ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಈ ಹಿಂದೆ ಅಂಬೇಡ್ಕರ್‌ ಕುರಿತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹಪಂಕ್ತಿ ಭೋಜನದದಲ್ಲೂ ಭಾಗಿಯಾಗಿದ್ದೇನೆ. ನಾನು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ. ಆರ್‌ಎಸ್‌ಎಸ್‌ ದೇಶದ ಅಭಿವೃದ್ಧಿಗೆ ನಿವಾಸಿಗಳನ್ನು ಒಗ್ಗೂಡಿಸುವಲ್ಲಿ ಕಾರ್ಯನಿರತವಾಗಿದೆ. ಹೀಗಾಗಿ ನನ್ನ ಮತ್ತು ಸಂಘದವರ ಆಶಯ, ಗುರಿಗಳಲ್ಲಿ ಸಾಮ್ಯತೆ ಕಂಡು ಬರುತ್ತದೆ ಎಂದು ಶ್ರೀಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next