Advertisement

ನನ್ನ ಕೈ ಮಾತ್ರ ಬಿಡಬೇಡಿ : ಭದ್ರ ಕೋಟೆಯಲ್ಲಿ  ಮಲ್ಲಿಕಾರ್ಜುನ ಖರ್ಗೆ 

03:37 PM Mar 10, 2019 | Team Udayavani |

ಯಾದಗಿರಿ : ಯಾವುದೇ ಶಕ್ತಿಗಳು ಒಂದಾಗಿ ಬಂದರೂ ನನ್ನ ಕೈ ಮಾತ್ರ ಬಿಡಬೇಡಿ ಎಂದು ಕಾಂಗ್ರೆಸ್‌ ಸಂಸದಿಯ ನಾಯಕ, ಕಲಬುರಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ. 

Advertisement

ಭದ್ರ ಕೋಟೆಯಾಗಿದ್ದ  ಗುರುಮಿಠಕಲ್‌ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಈ ಕ್ಷೇತ್ರ ನನ್ನನ್ನು ದೇಶಕ್ಕೆ ಗುರುತಿಸಿ ಕೊಟ್ಟಿದೆ. ವಿಧಾಸಭೆಗೆ ನನ್ನನ್ನು 49,000 ಮತಗಳ ಅಂತರಿಂದ ಗೆಲ್ಲಿಸಿದ್ದೀರಿ ಅದಕ್ಕಿಂತ ಹೆಚ್ಚು ಮತಗಳ ಅಂತರಲ್ಲಿ ಲೋಕಸಭೆಗೆ ಗೆಲ್ಲಿಸಬೇಕು ಎಂದರು. 

ನನ್ನ ಸೋಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತಂದು ಸಮಾವೇಶ ನಡೆಸಿದ್ದಾರೆ, ನಾನು ಯಾವುದಕ್ಕೂ ಹೆದರುವುದಿಲ್ಲ, ಮೋದಿ ತತ್ವ ಮತ್ತು ಆರ್‌ಎಸ್‌ಎಸ್‌ ವಿರುದ್ಧ ಹೋರಾಟ ನಡೆಸುತ್ತೇನೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next