Advertisement

ಬೇಡ-ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರ ನೀಡದಿರಿ

04:36 PM Jul 13, 2019 | Team Udayavani |

ಲಕ್ಷ್ಮೇಶ್ವರ: ಬೇಡ, ಜಂಗಮ ಜನಾಂಗದವರಿಗೆ ಎಸ್‌ಸಿ ಜಾತಿ ಪ್ರಮಾಣ ಪತ್ರ ನೀಡದಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದ ಅಂಬೇಡ್ಕರ್‌ ಸೇನೆ ಹಾಗೂ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಪುರಸಭೆ ಸದಸ್ಯ ರಾಮಣ್ಣ ಗಡದವರ ಮತ್ತು ಸುರೇಶ ಬೀರಣ್ಣವರ ಮಾತನಾಡಿ, ಅಖಂಡ ಧಾರವಾಡ ಜಿಲ್ಲೆಯಲ್ಲಿ ಮೂಲ ಎಸ್‌ಸಿ ಜನಾಂಗದವರನ್ನು ಹೊರತುಪಡಿಸಿ ಬೇರೆ ಯಾರೂ ಈ ಜಾತಿಯ ಪ್ರಮಾಣ ಪತ್ರ ಪಡೆದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಬೇಡ ಜಂಗಮರು ಎಸ್‌ಸಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಒಂದೊಮ್ಮೆ ಈ ಪ್ರಮಾಣ ಪತ್ರ ನೀಡಿದ್ದರೆ ಅದನ್ನು ಅಸಿಂಧುಗೊಳಿಸಬೇಕು. ನಿಜವಾದ ಎಸ್‌ಸಿ ಜನಾಂಗದವರಿಗೆ ಅನ್ಯಾಯವಾಗುವುದನ್ನು ತಡೆಗಟ್ಟಲು ದಲಿತಪರ ಸಂಘಟನೆಗಳು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.

ಹುಲ್ಲೇಶ ಗಡದವರ, ಬಸವರಾಜ ಹಿರೇಮನಿ, ಪೃಥ್ವಿರಾಜ ನಂದೆಣ್ಣವರ, ಸದಾಶಿವ ನಂದೆಣ್ಣವರ, ಮಂಜುನಾಥ ಗಡದವರ, ಮಂಜುನಾಥ ಅಯ್ಯಣ್ಣವರ, ಪ್ರಕಾಶ ಹಿತ್ತಲಮನಿ, ಸುರೇಶ ಬೀರಣ್ಣವರ, ವಿಶ್ವ ಭಜಕ್ಕನವರ, ಶಿವಾನಂದ ಅಡಗಿಮನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next