Advertisement

ಸುರಕ್ಷತೆ ಪರೀಕ್ಷೆಗೆ ವೇಷ ಮರೆಸಿ ಸಂಚರಿಸಿದ ಬೇಡಿ

07:00 AM Aug 20, 2017 | Team Udayavani |

ಪುದುಚೇರಿ: ರಾತ್ರಿ ವೇಳೆ ಪುದುಚೇರಿ ಮಹಿಳೆಯರು ಎಷ್ಟು ಸುರಕ್ಷಿತ ಎಂಬುದನ್ನು ತಿಳಿಯಲು ಸ್ವತಃ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಅವರು ವೇಷಮರೆಸಿಕೊಂಡು ರಾತ್ರಿ ವೇಳೆ ಪುದುಚೇರಿಯಾದ್ಯಂತ ಸಂಚರಿಸಿದ್ದಾರೆ. ಬೇಡಿ ಚೂಡಿದಾರ್‌ ಧರಿಸಿ, ಅದರ ಶಾಲಿನ ಮೂಲಕ ಮುಖವನ್ನು ಮುಚ್ಚಿಕೊಂಡು ಸ್ಕೂಟರ್‌ನಲ್ಲಿ ಸಂಚಾರ ನಡೆಸಿದ್ದಾರೆ. ತಮ್ಮ ರಾತ್ರಿ ಸಂಚಾರ ಮುಗಿಸಿ ಮರಳಿದ ಬಳಿಕ “ರಾತ್ರಿ ಬೈಕ್‌ ಸಂಚಾರ ಮುಗಿಸಿ ಬಂದೆ. ಪುದುಚೇರಿ ಮಹಿಳೆಯರಿಗೆ ಸುರಕ್ಷಿತವಾಗಿಯೇ ಇದೆ’ ಎಂದು ಟ್ವೀಟ್‌ ಮಾಡಿದ್ದಾರೆ. ತಮ್ಮ  ಸಂಚಾರದ ವೀಡಿಯೋಗಳನ್ನು ಶೇರ್‌ ಮಾಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next