Advertisement

ಭಾರತದ ಸಮಗ್ರತೆಗೆ ಸವಾಲು ಹಾಕುವವರನ್ನು ಸಹಿಸಲ್ಲ: ಮೋದಿ

08:03 AM Feb 24, 2018 | Team Udayavani |

ಹೊಸದಿಲ್ಲಿ: ಭಾರತದ ಸಮಗ್ರತೆ, ಏಕತೆ ಮತ್ತು ಸಾರ್ವಭೌಮತ್ವಕ್ಕೆ ಸವಾಲು ಹಾಕುವವರನ್ನು ನಾವು ಸಹಿಸುವುದಿಲ್ಲ.’ ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡ್ನೂ ಅವರ ಸಮ್ಮುಖದಲ್ಲೇ ಪ್ರಧಾನಿ ನರೇಂದ್ರ ಮೋದಿ ಆಡಿದ ತೀಕ್ಷ್ಣ ಮಾತುಗಳಿವು.

Advertisement

ಶುಕ್ರವಾರ ಜಸ್ಟಿನ್‌ ಜತೆಗಿನ ಮಾತುಕತೆ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಪ್ರಧಾನಿ ಮೋದಿ ಖಲಿಸ್ಥಾನ ವಿಚಾರದಲ್ಲಿ ಕೆನಡಾ ಸರ ಕಾರದ ಮೃದು ಧೋರಣೆ ಯನ್ನು ಪರೋಕ್ಷವಾಗಿ ಖಂಡಿಸಿದ್ದು ಕಂಡುಬಂತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ರಾಜಕೀಯ ಉದ್ದೇಶಗಳಿಗಾಗಿ ಧರ್ಮ ವನ್ನು ದುರ್ಬಳಕೆ ಮಾಡಿ ಕೊಳ್ಳುವುದಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಸೂಚ್ಯವಾಗಿ ಜಸ್ಟಿನ್‌ಗೆ ಸಂದೇಶ ರವಾನಿಸಿದರು.

“ನಾವು ದ್ವಿಪಕ್ಷೀಯ ಸಂಬಂಧ ವೃದ್ಧಿ,  ನಮ್ಮ ರಕ್ಷಣಾ ಸಹಕಾರ ಬಲಿಷ್ಠಗೊಳಿಸುವ ಬಗ್ಗೆ ಚರ್ಚಿಸಿದ್ದೇವೆ. ಭಯೋತ್ಪಾದನೆ, ಪ್ರತ್ಯೇಕತಾವಾದ ಭಾರತ, ಕೆನಡಾ ದಂಥ ರಾಷ್ಟ್ರಗಳಿಗೆ ಅಪಾಯಕಾರಿ. 5 ದಿನಗಳ ಹಿಂದೆಯೇ ಭಾರತ ಪ್ರವಾಸ ಆರಂಭಿಸಿರುವ ಕಾರಣ ಜಸ್ಟಿನ್‌ ನಮ್ಮ ದೇಶದ ವೈವಿಧ್ಯತೆಯನ್ನು ಪ್ರತ್ಯಕ್ಷವಾಗಿ ನೋಡಿರುತ್ತಾರೆ. ಭಾರತದ ಈ ಸಮಗ್ರತೆಗೆ ಧಕ್ಕೆ ತರುವವರನ್ನು ನಾವು ಸಹಿಸಲು ಅಸಾಧ್ಯ’ ಎಂದೂ ಪ್ರಧಾನಿ ಹೇಳಿದರು.

ಆಲಿಂಗನದ ಸ್ವಾಗತ: ಇದಕ್ಕೂ ಮುನ್ನ ದಿಲ್ಲಿಗೆ ಆಗಮಿಸಿದ ಜಸ್ಟಿನ್‌ ಟ್ರಾಡ್ನೂ ಕುಟುಂಬವನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ರಾಷ್ಟ್ರಪತಿ ಭವನದಲ್ಲಿ ಜಸ್ಟಿನ್‌ರನ್ನು ಆಲಂಗಿಸಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next