Advertisement

ಹಂಪಿ ಉತ್ಸವ ರದ್ದು ಮಾಡಬೇಡಿ : ಹೋರಾಟದ ಎಚ್ಚರಿಕೆ ನೀಡಿದ ಬಿಜೆಪಿ  

03:01 PM Dec 02, 2018 | Team Udayavani |

ಬಳ್ಳಾರಿ : ಬರದ ನೆಪವೊಡ್ಡಿ ವಿಶ್ವವಿಖ್ಯಾತ ಹಂಪಿ ಉತ್ಸವ ರದ್ದುಗೊಳಿಸಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ದ ಬಳ್ಳಾರಿ ಬಿಜೆಪಿ ಆಕ್ರೋಶ ಹೊರ ಹಾಕಿದ್ದು, ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. 

Advertisement

ಭಾನುವಾರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ  ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ನಿಮಗೆ ಸಾಧನಾ ಸಮಾವೇಶ ಮಾಡಲು ಹಣ ಇದೆ, ಅನಗತ್ಯ ವಾದ ಜಯಂತಿಗಳನ್ನು ಮಾಡಲು ಹಣವಿದೆ. ಆದರೆ ನಮ್ಮ ನಾಡಿನ ಹಿರಿಮೆಯಾಗಿರುವ ವಿಶ್ವಖ್ಯಾತಿ ಪಡೆದಿರುವ ಹಂಪಿ ಉತ್ಸವ ಮಾಡಲು ಹಣವಿಲ್ಲವೇ ಎಂದು ಪ್ರಶ್ನಿಸಿದರು. 

ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಿಸಬಾರದು. ಪ್ರತೀ ವರ್ಷ ಮಾಡಿದಂತೆ ಅದ್ಧೂರಿಯಾಗಿ ಹಂಪಿ ಉತ್ಸವವನ್ನು ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. 

ಹಣದ ಕೊರತೆ ಕಾಡುತ್ತಿದ್ದರೆ ಭಿಕ್ಷೆ ಬೇಡಿ ಹಣ ಒಗ್ಗೂಡಿಸಿ ನೀಡುತ್ತೇವೆ ಎಂದು ತಿಳಿಸಿದರು. 

Advertisement

ಹಂಪಿ ಉತ್ಸವ ನಡೆಸುತ್ತೇವೆ

ಬಳ್ಳಾರಿ ಸಂಸದ ವಿ.ಎಸ್‌.ಉಗ್ರಪ್ಪ ಅವರು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿ ಹಂಪಿ ಉತ್ಸವ ರದ್ದು ಮಾಡಬೇಡಿ ಎಂದು ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.

ಹಂಪಿ ಉತ್ಸವ ರದ್ದು ಮಾಡಿದರೆ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಜನ ನಮಗೆ ಭರ್ಜರಿ ಆಶೀರ್ವಾದ ನೀಡಿದ್ದಾರೆ ಎಂದು ಮನವಿ ಮಾಡಿರುವುದಾಗಿ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next