Advertisement

ಸುಳ್ಳು ಭರವಸೆ ನಂಬಬೇಡಿ: ಗುತ್ತೇದಾರ

11:29 AM May 11, 2018 | |

ಆಳಂದ: ಪಟ್ಟಣದಲ್ಲಿ ಗುರುವಾರ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಸುಭಾಷ ಗುತ್ತೇದಾರ ರೋಡ್‌ ಶೋ ನಡೆಸಿ
ಮತಯಾಚಿಸಿದರು. ಪಟ್ಟಣದ ಹನುಮಾನ ದೇವಸ್ಥಾನದಿಂದ ಆರಂಭವಾದ ರೋಡ್‌ ಶೋ ಗಣೇಶ ಚೌಕ್‌, ಅಂಬಾಭವಾನಿ ದೇವಸ್ಥಾನ, ರಜ್ವಿ ರೋಡ್‌, ಬಸ್‌ ನಿಲ್ದಾಣದಿಂದ ಶ್ರೀರಾಮ ಮಾರುಕಟ್ಟೆವರೆಗೆ ನಡೆಯಿತು.

Advertisement

ನಂತರ ಮಾತನಾಡಿದ ಅವರು, ಸುಳ್ಳು ಹೇಳುವ ಶಾಸಕ ಬಿ. ಆರ್‌. ಪಾಟೀಲ ಅವರನ್ನು ಜನ ಈ ಬಾರಿ ಮನೆಗೆ ಕಳುಹಿಸುವ ದೃಢನಿರ್ಧಾರ ಮಾಡಿದ್ದಾರೆ. ಅದಕ್ಕಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಮತದಾರರು ಸುಳ್ಳು ಭರವಸೆಗಳನ್ನು ನಂಬಬಾರದು ಎಂದು ಹೇಳಿದರು.

ಹಾಲಿ ಶಾಸಕರು ಐದು ವರ್ಷಗಳ ಕಾಲ ಜನರಿಗೆ ಭರವಸೆ ಮಾತ್ರ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ನೀಡಿದ ಯಾವೊಂದು ಭರವಸೆಯನ್ನು ಈಡೇರಿಸಿಲ್ಲ. ಸಾಮರಸ್ಯದಿಂದ ಬದುಕುತ್ತಿದ್ದ ತಾಲೂಕಿನ ಜನತೆಯಲ್ಲಿ ಜಾತಿ, ಧರ್ಮಗಳ ವಿಷ ಬೀಜ ಬಿತ್ತಿ ಒಡೆದು ಆಳುವ ಪ್ರವೃತ್ತಿಗೆ ಕೈ ಹಾಕಿದ್ದಾರೆ. ಹೋದಲ್ಲೆಲ್ಲ ಜಾತಿ ಹೆಸರು ಹೇಳಿ ಮತ ಕೇಳುತ್ತಿರುವುದು ಅವರ ಅಸಲಿ ಮುಖ ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.

ತಾಲೂಕಿನಲ್ಲಿ ಬಿಜೆಪಿ ಜತೆಗೆ ಎಲ್ಲ ವರ್ಗದ ಜನರು ನಿಂತಿರುವುದನ್ನು ನೋಡಿ ಅವರಲ್ಲಿ ಅಸೂಯೆ ಹುಟ್ಟಿದೆ. ಹೀಗಾಗಿ ಸುಳ್ಳು ಸುದ್ದಿ ಹರಡಿಸಿ ಮತ ಪಡೆಯುವ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಭೀಮಾಶಂಕರ ಪಾಟೀಲ, ರಮ್ಮು ಅನ್ಸಾರಿ, ಲಿಂಗರಾಜ ಬಿರಾದಾರ,
ವೆಂಕಟರಾವ್‌, ಅಸೀಫ್‌ ಅನ್ಸಾರಿ, ಪರಮೇಶ್ವರ ಹತ್ತರಕಿ, ಈರಣ್ಣ ಹತ್ತರಕಿ, ಮಹೇಶ ಗೌಳಿ, ಶಿವಪುತ್ರ ಹತ್ತಿ, ಗುಂಡು
ಗೌಳಿ, ಸುನೀಲ ನಿಪ್ಪಾಣಿ, ಹಣಮಂತ ಕುಂಬಾರ, ಶ್ರೀಶೈಲ ಖಜೂರಿ, ಅರುಣ ಹುಂಡೇಕಾರ, ಅರವಿಂದ ನಾಟೀಕಾರ,
ರಮೇಶ ಉಂಬರೆ, ಅಂಬಾದಾಸ ಪವಾರೆ, ಸುನೀಲ ಹಿರೋಳಿ, ಯೂನುಸ್‌ ಅನ್ಸಾರಿ ಹಾಗೂ ಮತ್ತಿತರರು ಭಾಗವಹಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next