Advertisement

DMK Leader Guruswamy Murthy ಹತ್ಯೆ ಯತ್ನ ಪ್ರಕರಣ: ಮಧುರೈನ ಆರೋಪಿ ಬಂಧನ

01:41 PM Sep 11, 2023 | Team Udayavani |

ಬೆಂಗಳೂರು:  ಇತ್ತೀಚೆಗೆ ನಡೆದ ರೌಡಿಶೀಟರ್‌ ಹಾಗೂ ತಮಿಳುನಾಡಿನ ಡಿಎಂಕೆ ನಾಯಕ ಗುರುಸ್ವಾಮಿ ಹತ್ಯೆ ಯತ್ನ ಪ್ರಕರಣ ಸಂಬಂಧ ಮಧುರೈ ಮೂಲದ ಆರೋಪಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಮಧುರೈನ ಪ್ರಸನ್ನ (26) ಬಂಧಿತ.

ಆರೋಪಿ ತನ್ನ ಸ್ನೇಹಿತರ ಜತೆ ಸೆ.4ರಂದು ಡಿಎಂಕೆ ನಾಯಕ ಹಾಗೂ ತಮಿಳುನಾಡಿನ ವಿವಿಧ ಪೊಲೀಸ್‌ ಠಾಣೆಗಳ ರೌಡಿಶೀಟರ್‌ ಗುರುಸ್ವಾಮಿ ಹತ್ಯೆಗೆ ಯತ್ನಿಸಿದ್ದ. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಈತನ ವಿರುದ್ಧ ತಮಿಳುನಾಡಿನ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಗಲಾಟೆ, ರೌಡಿ ಚಟುವಟಿಕೆಗಳ ಆರೋಪದಡಿ ಪ್ರಕರಣಗಳು ದಾಖಲಾಗಿದೆ. ಆರೋಪಿ ಪ್ರಸನ್ನ ತಮಿಳುನಾಡಿನ ಎಐಡಿಎಂಕೆ ನಾಯಕ, ರೌಡಿಶೀಟರ್‌ ಪಾಂಡಿಯನ್‌ನ ಸಹಚರ ನವೀನ್‌ ಎಂಬಾತನ ಆತ್ಮೀಯ ಸ್ನೇಹಿತನಾಗಿದ್ದಾನೆ. ಈತನ ವಿಚಾರಣೆಯಲ್ಲಿ ಸ್ನೇಹಿತ ನವೀನ್‌ ಕೋರಿಗೆ ಮೇರೆಗೆ ಬೆಂಗಳೂರಿಗೆ ಬಂದು ಗುರುಸ್ವಾಮಿ ಹತ್ಯೆಗೆ ಯತ್ನಿಸಲಾಗಿತ್ತು. ಬೇರೆ ವಿಚಾರಗಳ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾನೆ. ಈತನ ಸ್ನೇಹಿತ ನವೀನ್‌ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಹೇಳಲಾಗಿದೆ.

ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next