Advertisement

ಡಿಎಂಕೆ ಹಿಂದೂ ವಿರೋಧಿ ಪಕ್ಷ, ಮತದಾರರು ತಕ್ಕ ಪಾಠ ಕಲಿಸಬೇಕು: ತೇಜಸ್ವಿ ಸೂರ್ಯ

10:56 AM Feb 22, 2021 | Team Udayavani |

ಚೆನ್ನೈ: ತಮಿಳುನಾಡಿನ ದ್ರಾವಿಡ್ ಮುನ್ನೇತ್ರ ಕಳಗಂ ಹಿಂದೂ ವಿರೋಧಿ ಪಕ್ಷ ಎಂದು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದು, ರಾಜ್ಯದ ಮತದಾರರು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸುವಂತೆ ಕರೆ ನೀಡಿದರು.

Advertisement

ಭಾನುವಾರ (ಫೆ.21,2021, ಬಿಜೆಪಿ ಯುವ ಮೋರ್ಚಾದ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ತೇಜಸ್ವಿ, ಡಿಎಂಕೆ ತನ್ನ ಹಗೆತನ ಸಿದ್ಧಾಂತದೊಂದಿಗೆ ಹಿಂದೂ ವಿರೋಧಿಯಾಗಿದೆ. ಪ್ರತಿಯೊಬ್ಬ ತಮಿಳರು ಹೆಮ್ಮೆಯ ಹಿಂದೂವಾಗಿದ್ದಾರೆ. ದೇಶದಲ್ಲಿಯೇ ಅತೀ ಹೆಚ್ಚು ದೇವಾಲಯಗಳನ್ನು ಹೊಂದಿರುವ ತಮಿಳುನಾಡು ಪವಿತ್ರಭೂಮಿಯಾಗಿದೆ. ತಮಿಳುನಾಡಿನ ಪ್ರತಿ ಇಂಚೂ ಪವಿತ್ರವಾಗಿದೆ, ಆದರೆ ಡಿಎಂಕೆ ಹಿಂದೂ ವಿರೋಧಿಯಾಗಿದೆ, ಹೀಗಾಗಿ ನಾವು ಡಿಎಂಕೆ ಪಕ್ಷವನ್ನು ಸೋಲಿಸಲೇಬೇಕಾಗಿದೆ ಎಂದು ಹೇಳಿದರು.

ಭಾರತೀಯ ಜನತಾ ಪಕ್ಷ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತದೆ ಎಂದು ತೇಜಸ್ವಿ ಸೂರ್ಯ, ತಮಿಳುನಾಡು ಮತ್ತು ತಮಿಳು ಭಾಷೆ ಬಗ್ಗೆಯೂ ಬಿಜೆಪಿ ಗೌರವ ಹೊಂದಿರುವುದಾಗಿ ತಿಳಿಸಿದರು.

ಭಾರತೀಯ ಜನತಾ ಪಕ್ಷ ಮಾತ್ರ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗೆ ಪ್ರೋತ್ಸಾಹ ನೀಡಲಿದೆ. ಒಂದು ವೇಳೆ ತಮಿಳು ಬದುಕುಳಿದರೆ, ಹಿಂದುತ್ವ ಜಯಸಾಧಿಸಿದಂತೆ. ಕನ್ನಡ ಗೆದ್ದರೆ, ಹಿಂದುತ್ವ ಜಯಗಳಿಸಿದಂತೆ ಎಂದು ತೇಜಸ್ವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next