Advertisement

ಸಿದ್ದು ಸಮ್ರಿಶ್ರ ಸಂಶಯ:ಹೇಳಿಕೆ ಅಧಿಕೃತವಲ್ಲ ಎಂದ ಸಚಿವ ಡಿಕೆಶಿ!

12:21 PM Jun 27, 2018 | Team Udayavani |

ಬೆಂಗಳೂರು: ಸರ್ಕಾರದ ಭವಿಷ್ಯದ ಬಗ್ಗೆ ಅನುಮಾನವ್ಯಕ್ತ ಪಡಿಸಿರುವ ವಿಡಿಯೋ ಕುರಿತಾಗಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದು, ‘ಯಾರೋ ಕಿಡಿಗೇಡಿಗಳು ಆಂತರಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಿಂದ ಸರ್ಕಾರದ ಮೇಲೆ ಪರಿಣಾಮವಿಲ್ಲ’ ಎಂದಿದ್ದಾರೆ. 

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ ನಾವು ರಾಹುಲ್‌ ಗಾಂಧಿ ಅವರ ಸಮ್ಮತಿಯ ಮೇರೆಗೆ ಬೇಷರತ್‌ ಬೆಂಬಲ ನೀಡಿದ್ದೇವೆ. ವೇಣುಗೋಪಾಲ್‌ ರಾಹುಲ್‌ ಅವರು ತೀರ್ಮಾನ ಕೈಗೊಂಡು ಸಹಿ ಹಾಕಿರುವ ಪತ್ರವನ್ನು ಮಾಧ್ಯಮಗಳಿಗೆ ನೀಡಿದ್ದೇವಲ್ಲಾ ಅದು ಊರ್ಜಿತ, ಮತ್ತೆ ಯಾವ ಹೇಳಿಕೆಗಳೂ ಅಧಿಕೃತವಲ್ಲ  ಎಂದರು. 

ನಮ್ಮ ಸರ್ಕಾರ 5 ವರ್ಷ ಇರುತ್ತದೆ, ನಾವು ಜನರಿಗೆ ಕೊಟ್ಟ ಮಾತು ಈಡೇರಿಸಿಕೊಡಬೇಕಾಗಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next