Advertisement

ದ.ಕ.: ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

10:47 AM Mar 09, 2018 | Team Udayavani |

ಮಂಗಳೂರು : ಚುನಾವಣೆ ಹಿನ್ನೆಲೆಯಲ್ಲಿ ಮತ್ತಷ್ಟು ಪೊಲೀಸ್‌ ಇನ್ಸ್‌ಪೆಕ್ಟರ್‌ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಇತರ ಜಿಲ್ಲೆಗಳಿಗೆ ಹಾಗೂ ಇತರ ಜಿಲ್ಲೆಗಳಿಂದ ದ.ಕ. ಜಿಲ್ಲೆಗೆ ವರ್ಗಾವಣೆಗೊಳಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

Advertisement

ಸುರತ್ಕಲ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಶ್ರೀಧರ ಶಾಸ್ತ್ರೀ ಅವರನ್ನು ದಾವಣಗೆರೆ ಡಿಸಿಆರ್‌ಇ, ಗುರುದತ್‌ ಕಾಮತ್‌ ಸಿಸಿಬಿ ಮಂಗಳೂರು ಸಿಟಿಯಿಂದ ಉತ್ತರ ಕನ್ನಡ ಡಿಸಿಆರ್‌ಬಿ, ಮಹಮ್ಮದ್‌ ಶರೀಫ್ ಸಿಸಿಬಿ ಸ್ಪೆಷಲ್‌ ಪೊಲೀಸ್‌ ಸ್ಟೇಷನ್‌ನಿಂದ ಚಿಕ್ಕಮಗಳೂರು ಡಿಸಿಐಬಿ, ಶಿವಪ್ರಕಾಶ್‌ ನಗರ ಪೂರ್ವ ಸಂಚಾರ ಠಾಣೆಯಿಂದ ಸಿಸಿಬಿ ಮೈಸೂರು ನಗರ, ರಾಮಚಂದ್ರ ನಾಯಕ್‌ ಮೂಡಬಿದಿರೆ ಪೊಲೀಸ್‌ ಠಾಣೆಯಿಂದ ಡಿಸಿಬಿ ಉತ್ತರಕನ್ನಡ, ಉರ್ವ ಠಾಣೆಯ ರವೀಶ್‌ ನಾಯಕ್‌ ಬೆಂಗಳೂರಿನ ಐಎಸ್‌ಡಿ, ಕಲಾವತಿ ಕೆ. ಅವರನ್ನು ಪಾಂಡೇಶ್ವರ ಮಹಿಳಾ ಠಾಣೆಯಿಂದ ಉಡುಪಿ ಜಿಲ್ಲಾ ಮಹಿಳಾ ಠಾಣೆಗೆ ವರ್ಗಾಯಿಸ‌ಲಾಗಿದೆ.

ಮೋಹನ್‌ ಕೊಟ್ಟಾರಿ ಅವರನ್ನು ಸಿಟಿ ಎಸ್‌ಬಿ ಯಿಂದ ಎಸಿಬಿ ಮಂಗಳೂರು, ಅಶೋಕ್‌ ಪಿ. ಅವರನ್ನು ಕೊಣಾಜೆ ಠಾಣೆಯಿಂದ ಡಿಸಿಆರ್‌ಇ ಮಂಗಳೂರು, ನಾಗರಾಜ ಟಿ.ಡಿ ಅವರನ್ನು ಡಿಎಸ್‌ಬಿಯಿಂದ ಸಿಎಸ್‌ಪಿಗೆ ವರ್ಗಾವಣೆ ಮಾಡಲಾಗಿದೆ.

ಶಿವಮೊಗ್ಗ ಡಿಎಸ್‌ಬಿಯ ವಾಸೀಮ್‌ ಅಹಮ್ಮದ್‌ ಅವರು ಮಂಗಳೂರು ಸಿಸಿಬಿ ಸ್ಪೆಷಲ್‌ ಪೊಲೀಸ್‌ ಠಾಣೆಗೆ, ಮೈಸೂರು ಲಕ್ಷ್ಮೀಪುರಂ ಪೊಲೀಸ್‌ ಠಾಣೆಯ ರಘು ಜಿ.ಎಸ್‌.ಮಂಗಳೂರು ಸಿಸಿಆರ್‌ಬಿಗೆ ವರ್ಗಾವಣೆಗೊಂಡಿದ್ದಾರೆ. ವರ್ಗಾವಣೆ ಗೊಂಡಿರುವ ಸ್ಥಳಗಳಿಗೆ ತೆರಳಿ ತತ್‌ಕ್ಷಣ ಕೆಲಸಕ್ಕೆ ಹಾಜರಾಗಬೇಕೆಂದು ಆದೇಶದಲ್ಲಿ ತಿಳಿಸಿಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next